Advertisement

Hunsur: ಮಕರ ಸಂಕ್ರಾಂತಿ; ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಮೆರವಣಿಗೆ

02:41 PM Jan 15, 2024 | Team Udayavani |

ಹುಣಸೂರು: ಧನುರ್ಮಾಸದ ಕೊನೆ ದಿನದ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಮೆರವಣಿಗೆ ನಡೆಸಿದರು.

Advertisement

ನಗರದ ವಿವಿಧ ಬಡಾವಣೆಗಳ ಶ್ರೀ ರಾಮ ಮಂದಿರಗಳಿಂದ ಲಕ್ಷಣತೀರ್ಥ ನದಿ ತಟದ ಅಶ್ವತ್ಥ ಕಟ್ಟೆಗೆ ಹೊತ್ತು ತಂದಿದ್ದ ಅಲಂಕೃತ ಪಲಕ್ಕಿಯಲ್ಲಿ ಶ್ರೀ ರಾಮದೇವರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದ ನಂತರ  ರಾಮನಾಮ ಜಪ ಮಾಡುತ್ತಾ ನಗರದ ಪ್ರಮುಖ ಬೀದಿಗಳಲ್ಲಿ  ಮೆರವಣಿಗೆ ನಡೆಸಿದರು.

ಮೆರವಣಿಗೆ ಮನೆ ಬಳಿಗೆ ಬಂದ ವೇಳೆ ಪೂಜೆ ಸಲ್ಲಿಸಿದರು. ರಸ್ತೆಯಲ್ಲಿ ಈಡುಗಾಯಿ ಒಡೆದು ಧನ್ಯತಾ ಭಾವ ಮೆರೆದರು.

ಆನಂತರ ರಾಮ ಮಂದಿರಗಳಲ್ಲಿ ಭಜನೆ ನಡೆಸಿ ಮಹಾ ಮಂಗಳಾರತಿ ನಂತರ ಕೋಸಂಬರಿ, ಮಜ್ಜಿಗೆ, ಪಾನಕ, ಸಿಹಿ, ಖಾರ ಪೊಂಗಲ್ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next