Advertisement

Adani: ಮಹುವಾ ಪ್ರಕರಣಕ್ಕೆ ತಿರುವು:  ತಪ್ಪೊಪ್ಪಿಕೊಂಡ ಉದ್ಯಮಿ! 

10:01 AM Oct 20, 2023 | Team Udayavani |
ಹೊಸದಿಲ್ಲಿ: ಸಂಸತ್ತಿನಲ್ಲಿ ಅದಾನಿ ಗ್ರೂಪ್‌ ಹಾಗೂ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ಪ್ರಶ್ನೆಗಳನ್ನು ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆಂಬ ಆರೋಪಕ್ಕೆ ಇದೀಗ ಪಷ್ಟಿ ಸಿಕ್ಕಿದೆ. ಲಂಚ ನೀಡಿರುವ ಆರೋಪ ಎದುರಿಸುತ್ತಿದ್ದ ಉದ್ಯಮಿ ದರ್ಶನ್‌ ಹೀರಾನಂದಿನಿ ಸ್ವತಃ ತಾವೇ ತಪ್ಪೊಪ್ಪಿಕೊಂಡಿದ್ದಾರೆ!
ಮಹುವಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿದ್ದ ಈ ಆರೋಪ ಸರಿಯಲ್ಲ ಎಂದು ವಾದಿಸಿ ಮಹುವಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದರ ವಿಚಾರಣೆ ಹೊಸ್ತಿಲಿನಲ್ಲಿರುವಾಗಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಉದ್ಯಮಿ ದರ್ಶನ್‌ ಸಲ್ಲಿಸಿರುವ ಅಫಿದವಿತ್‌ನಲ್ಲಿ ಸಂಸತ್‌ ಸದಸ್ಯೆ ಯಾಗಿರುವ ಮಹುವಾ ತಮ್ಮ ಮೇಲ್‌ ಐಡಿ ಅನ್ನು  ಹಂಚಿಕೊಂಡಿದ್ದರು.  ನನಗೆ ಬೇಕಾದಾಗ ನಾನು ಲಾಗಿನ್‌ ಆಗಿ ಬೇಕಾದ ಪ್ರಶ್ನೆಗಳನ್ನು ಅವರ ಐಡಿಯಿಂದಲೇ ಪ್ರಸ್ತಾವಿಸುತ್ತಿದ್ದೆ. ಇದಕ್ಕೆ ಆಕೆ ನನ್ನಿಂದ ಹಲವು ಬೇಡಿಕೆಗಳನ್ನೂ ಇಟ್ಟಿದ್ದರು ಎಂದು ಅವರು ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next