Advertisement

ಮೈಸೂರಿನ ಯುವಕನಿಗೆ ಗಿಫ್ಟ್ ನೀಡಿದ ಮಹಿಂದ್ರಾ

11:12 PM Oct 23, 2019 | Lakshmi GovindaRaju |

ನವದೆಹಲಿ: ಕಳೆದ ವರ್ಷ, ತಮ್ಮ ತಾಯಿಯನ್ನು ತಮ್ಮ ಹಳೆಯ ಸ್ಕೂಟರಿನ ಮೇಲೆ ಕೂರಿಸಿಕೊಂಡು ಇಡೀ ದೇಶವನ್ನೇ ಸುತ್ತಿ ಬಂದು ಸುದ್ದಿಯಾಗಿದ್ದ ಮೈಸೂರಿನ ಡಿ. ಕೃಷ್ಣ ಕುಮಾರ್‌ರವರ (39) ಮಾತೃಪ್ರೇಮವನ್ನು ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್‌ ಮಹಿಂದ್ರಾ ಮೆಚ್ಚಿಕೊಂಡಿದ್ದು, ಕೃಷ್ಣಕುಮಾರ್‌ರವರಿಗೆ “ಮಹಿಂದ್ರಾ ಎಕ್ಸ್‌ಯುವಿ 100 ಎನ್‌ಎಕ್ಸ್‌ಟಿ’ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

Advertisement

ದೇಶದ ಎಲ್ಲಾ ಪುಣ್ಯಕ್ಷೇತ್ರಗಳನ್ನು ನೋಡುವ ತನ್ನ ತಾಯಿಯ ಆಸೆ ಪೂರೈಸಲೆಂದೇ ತಾವು ಮಾಡುತ್ತಿದ್ದ ಬ್ಯಾಂಕ್‌ ನೌಕರಿಯನ್ನು ಬಿಟ್ಟು, ತಾಯಿಯನ್ನು ತನ್ನ 20 ವರ್ಷದಷ್ಟು ಹಳೆಯಾದ ಬಜಾಜ್‌ ಸ್ಕೂಟರಿನ ಮೇಲೆ 48,000 ಕಿ.ಮೀ. ಪ್ರಯಾಣ ಮಾಡಿದ್ದರು

ಕೃಷ್ಣಕುಮಾರ್‌. ಅವರ ವಿಚಾರವನ್ನು ಇತ್ತೀಚೆಗೆ ತಮ್ಮ ಸ್ನೇಹಿತ ಮನೋಜ್‌ ಕುಮಾರ್‌ ಎಂಬುವರ ಟ್ವೀಟ್‌ ಮೂಲಕ ತಿಳಿದ ಮಹಿಂದ್ರಾ, “”ಕೃಷ್ಣಕುಮಾರ್‌ರವರ ಮಾತೃಪ್ರೇಮ ಹಾಗೂ ದೇಶಪ್ರೇಮ ಎರಡೂ ಶ್ಲಾಘನೀಯ. ಅವರ ತಾಯಿಯವರ ಮುಂದಿನ ಪ್ರವಾಸಕ್ಕೆ ನಮ್ಮ ಕಂಪನಿಯ ಮಹಿಂದ್ರಾ ಎಕ್ಸ್‌ಯುವಿ 100 ಎನ್‌ಎಕ್ಸ್‌ಟಿ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next