Advertisement

ನಾಳೆ ಮಹಾಯೋಗಿ ವೇಮನರ 609ನೇ ಜಯಂತ್ಯುತ್ಸವ

04:26 PM Feb 27, 2021 | Team Udayavani |

ಬಾಗಲಕೋಟೆ: ಮಹಾಯೋಗಿ ವೇಮನರ 609ನೇ ಜಯಂತ್ಯುತ್ಸವ ಕಾರ್ಯಕ್ರಮ ಫೆ. 28ರಂದು ಬೆಳಗ್ಗೆ 10ಕ್ಕೆ ನವನಗರದ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಉಪಾಧ್ಯಕ್ಷ ನಿಂಗನಗೌಡ ಪಾಟೀಲ ಹಾಗೂ ರಡ್ಡಿ ಸಮಾಜದ ಹಿರಿಯ ಮುಖಂಡ ಎಸ್‌.ಎಸ್‌. ಬಳೂಲಮಟ್ಟಿ ಹೇಳಿದರು.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ವಿರೋಧ ಪಕ್ಷದ ನಾಯಕ ಎಸ್‌.ಆರ್‌. ನಾಯಕಉದ್ಘಾಟಿಸಲಿದ್ದಾರೆ. ಹರಿಹರ ತಾಲೂಕುಎರೆಹೊಸಳ್ಳಿಯ ವೇಮನ ಸಂಸ್ಥಾನ ಮಠದ ರಡ್ಡಿಗುರು ಪೀಠದ ಶ್ರೀ ವೇಮನಾನಂದ ಸ್ವಾಮೀಜಿಸಾನ್ನಿಧ್ಯ ವಹಿಸಲಿದ್ದಾರೆ. ಹೇಮರಡ್ಡಿ ಮಲ್ಲಮ್ಮಸೇವಾ ಸಂಸ್ಥೆ ಅಧ್ಯಕ್ಷ ಸಿ.ಕೆ. ಒಂಟಗೋಡಿ ಅಧ್ಯಕ್ಷತೆವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಚಿ ಸಚಿವ ರಾಮಲಿಂಗ ರೆಡ್ಡಿ, ರಾಜ್ಯ ಸರ್ಕಾರದಮುಖ್ಯ ಕಾರ್ಯದರ್ಶಿ ಪರವಿಕುಮಾರ ಪಿ.ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯಸಭೆ ಸದಸ್ಯ ಕೆ.ಸಿ. ರಾಮಮೂರ್ತಿ, ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ, ಎನ್‌.ಎಚ್‌. ಶಿವಶಂಕರ ರಡ್ಡಿ, ಶರಣಬಸಪ್ಪ ದರ್ಶನಾಪುರ, ಅಮೆರೇಗೌಡ ಪಾಟೀಲಬಯ್ನಾಪುರ, ಸಿಂಧನೂರ ಶಾಸಕ ವೆಂಕಟರಾವ್‌ ನಾಡಗೌಡ, ಯಲಬರ್ಗಾ ಶಾಸಕ ಹಾಲಪ್ಪಆಚಾರ, ಚಿಂತಾಮಣಿ ಶಾಸಕ ಎಂ. ಕೃಷ್ಣಾ ರೆಡ್ಡಿ,ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ,ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ,ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಶಾಸಕರಾದ ಎಂ. ಸತೀಶ, ಎ.ಎಸ್‌. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ,ನಾಗನಗೌಡ ಕಂದಕೂರ,ಎಸ್‌.ಎನ್‌.ಸುಬ್ಟಾರೆಡ್ಡಿ, ಸೌಮ್ಯಾ ರೆಡ್ಡಿ, ನಂದೀಶ ರೆಡ್ಡಿ, ಕೆ.ಎಸ್‌. ಕೃಷ್ಣಾರೆಡ್ಡಿ, ಅಜಯಕುಮಾರ ಸರನಾಯಕ, ಎಚ್‌.ಬಿ.ಪಾಟೀಲ, ಆರ್‌.ಎಸ್‌.ಪಾಟೀಲ, ಎಸ್‌ .ಜಯರಾಮರೆಡ್ಡಿ, ಗೂಳಪ್ಪ ಮಂಟೂರ, ಪಿ.ಎಚ್‌. ಪೂಜಾರ, ಜೆ.ಟಿ.ಪಾಟೀಲ ಮುಖ್ಯಅತಿಥಿಗಳಾಗಿಆಗಮಿಸಲಿದ್ದಾರೆ ಎಂದರು.

ಕಲಬುರಗಿಯ ಪತ್ರಕರ್ತ ಮಹಿಪಾಲರಡ್ಡಿ ಎಂ.ಸೇಡಂ ಉಪನ್ಯಾಸ ನೀಡುವರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆಊಟದ ವ್ಯವಸ್ಥೆ ಮಾಡಿದ ಸಾಯಿ ಅಕ್ರಿಕಲ್ಚರಲ್‌ ಟ್ರೇಡರ್ನ ಶಿವನಗೌಡ ಪಾಟೀಲ, ವಿವಿಧ ಸೇವೆಒದಗಿಸಿದ ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಕೆ.ಒಂಟಗೋಡಿ, ನಿಂಗನಗೌಡ ಪಾಟೀಲ, ಪ್ರಕಾಶಸಿಂಗರಡ್ಡಿ, ಸಂಜೀವರಡ್ಡಿ ಸತ್ಯರಡ್ಡಿ, ಅಪ್ಪಾಸಾಹೇಬದೇಸಾಯಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಎಂ.ಆರ್‌. ನಾಗನೂರ, ಎ.ಎಸ್‌. ದೇಸಾಯಿ, ಪ್ರಕಾಶ ಸಿಂಗರಡ್ಡಿ, ಸಿ.ಎಸ್‌. ನಾಲತವಾಡ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next