Advertisement

ಬಿಕ್ಕಟ್ಟು ಮುಂದುವರಿಕೆ; ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಶಿವಸೇನಾದಲ್ಲಿಯೇ ಈಗ ಎರಡು ಬಣ!

09:48 AM Nov 08, 2019 | Nagendra Trasi |

ನವದೆಹಲಿ:ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ಕುರಿತ ಬಿಜೆಪಿ-ಶಿವಸೇನಾ ನಡುವಿನ ಬಿಕ್ಕಟ್ಟು ಮುಂದುವರೆದಿರುವ ನಡುವೆ ಇದೀಗ ಸರ್ಕಾರ ರಚನೆ ವಿಚಾರದಲ್ಲಿ ಶಿವಸೇನಾದಲ್ಲಿಯೇ ಎರಡು ಗುಂಪುಗಳಾಗಿರುವುದಾಗಿ ವರದಿ ತಿಳಿಸಿದೆ.

Advertisement

ಶಿವಸೇನಾದ ಒಂದು ಶಾಸಕರ ಗುಂಪು ಈ ಬಿಕ್ಕಟ್ಟನ್ನು ಕೂಡಲೇ ಕೊನೆಗೊಳಿಸುವ ಬಗ್ಗೆ ಒಲವು ತೋರಿದ್ದರೆ, ಉಳಿದ ಮತ್ತೊಂದು ಶಾಸಕರ ಗುಂಪು ಬಿಜೆಪಿ ಜತೆ ಸರ್ಕಾರ ರಚನೆಗೆ 50;50 ಸೂತ್ರಕ್ಕೆ ಅಂಟಿಕೊಂಡಿರುವುದಾಗಿ ಮೂಲಗಳು ಹೇಳಿವೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಮತ್ತು ಬಿಜೆಪಿ ಮೈತ್ರಿಯಲ್ಲಿ ಸ್ಪರ್ಧಿಸಿದ್ದವು. ಎರಡು ಪಕ್ಷಗಳೂ ಮೈತ್ರಿ ಜತೆ ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿದ್ದವು. ಇದೀಗ ಸಿಎಂ ಹುದ್ದೆ ಶಿವಸೇನಾ ಮತ್ತು ಬಿಜೆಪಿಗೆ 50:50 ಸೂತ್ರದಲ್ಲಿ ಹಂಚಿಕೆಯಾಗಬೇಕೆಂದು ಶಿವಸೇನಾ ಪಟ್ಟು ಹಿಡಿದಿರುವುದು ಸರ್ಕಾರ ರಚನೆ ಬಿಕ್ಕಟ್ಟು ಮುಂದುವರಿಯಲು ಕಾರಣವಾಗಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆಯಲ್ಲಿ ಬಿಜೆಪಿಯದ್ದೇ ಮಹತ್ವದ ಪಾತ್ರ, ಅಲ್ಲದೇ ದೇವೇಂದ್ರ ಫಡ್ನವೀಸ್ ಅವರೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಬಿಜೆಪಿ ವಾದ.

Advertisement

Udayavani is now on Telegram. Click here to join our channel and stay updated with the latest news.

Next