Advertisement

ಕೋವಿಡ್ ಆತಂಕ: ಲಸಿಕೆ ಪಡೆಯಲು ಮುಗಿಬಿದ್ದ ಜನರು  

04:31 PM May 05, 2021 | Team Udayavani |

ಮುಂಬೈ: ಕೋವಿಡ್ ಸೋಂಕು ಹೊಡೆದಟ್ಟಲು ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ, ಈ ಅಭಿಯಾನದಿಂದಲೇ ಕೋವಿಡ್ ಮತ್ತಷ್ಟು ವ್ಯಾಪಿಸಲಿದೆಯೇ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಕಾರಣ ಮಹಾರಾಷ್ಟ್ರದಲ್ಲಿ ಇಂದು( ಮೇ.5) ವರದಿಯಾದ ಘಟನೆ.

Advertisement

ಕೋವಿಡ್ ಲಸಿಕೆ ಪಡೆಯಲು ಜನ ಜಂಗುಳಿ ಸೇರಿದ್ದು, ಸಾಮಾಜಿಕ ಅಂತರ ಮರೆತ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿಯ ಬಿಕೆಸಿ ಜಂಬೂ ಕೋವಿಡ್-19 ಲಸಿಕಾ ಕೇಂದ್ರ ನೂರಾರು ಜನರು ದೌಡಾಯಿಸಿ,ಲಸಿಕೆ ಪಡೆಯಲು ಜನರು ನೂಕು-ನುಗ್ಗಲು ನಡೆಸಿದ್ದಾರೆ.

ಇಂದು ಮುಂಜಾನೆಯಿಂದಲೇ ಕೇಂದ್ರದ ಎದುರು ಸೇರಿದ ಜನರು, ಸರಿಯಾಗಿ ಕ್ಯೂ ಕೂಡ ಹಚ್ಚದೆ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ. ಸರ್ಕಾರದ ವತಿಯಿಂದಲೂ ಯಾವುದೇ ವ್ಯವಸ್ಥೆ ಇಲ್ಲದ ಹಿನ್ನೆಲೆ ಜನರ ಮಧ್ಯೆ ಸಾಮಾಜಿಕ ಅಂತರ ಮಾಯವಾಗಿತ್ತು.

ಇನ್ನು ಮಹಾರಾಷ್ಟ್ರದಲ್ಲಿ ಕೋವಿಡ್ ಸಂಖ್ಯೆ ಮಿತಿ-ಮೀರಿದೆ. ಅದರಲ್ಲೂ ಮುಂಬೈನಲ್ಲಿ ಮಹಾಮಾರಿ ಸೋಂಕು ಉಲ್ಬಣಗೊಂಡಿದೆ. ಕೋವಿಡ್ ವಿರುದ್ಧ ಸರ್ಕಾರ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನೂ ಕೈಗೊಂಡಿದೆ. ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ಇತ್ತ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸಿದೆ. ಮೂರನೇ ಹಂತದಲ್ಲಿ 18 ರಿಂದ 45 ವಯಸ್ಸಿನವರಿಗೆಲ್ಲ ಲಸಿಕೆ ನೀಡಲು ಸರ್ಕಾರ ಚಾಲನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next