Advertisement

ಬಿಜೆಪಿಗೆ 164 ಕ್ಷೇತ್ರ ಶಿವಸೇನೆಗೆ 124

10:44 AM Oct 06, 2019 | Team Udayavani |

ಮುಂಬಯಿ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ, ಶಿವಸೇನೆ ಶುಕ್ರವಾರ ಅಧಿಕೃತವಾಗಿ ಸ್ಥಾನ ಹೊಂದಾಣಿಕೆ ಪ್ರಕಟಿಸಿವೆ. ಶಿವಸೇನೆ 124, ಬಿಜೆಪಿ 164 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಇನ್ನುಳಿದ 14 ಸ್ಥಾನಗಳನ್ನು ಮೈತ್ರಿ ಪಕ್ಷ ಗಳಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ.

Advertisement

ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮುಂಬಯಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಬಿಜೆಪಿ-ಶಿವಸೇನೆ ಮಹಾಮೈತ್ರಿ ಅ.21ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ನಾಯಕದ್ವಯರು ವ್ಯಕ್ತಪಡಿಸಿದ್ದಾರೆ. ಕೆಲವು ವಿಷಯಗಳ ಬಗ್ಗೆ ಶಿವಸೇನೆ ಜತೆಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಇದೆ. ಆದರೆ ಹಿಂದುತ್ವ ಎಂಬ ವಿಚಾರದಲ್ಲಿ ಎರಡೂ ಪಕ್ಷಗಳು ಒಂದೇ ನಿಲುವು ಹೊದಿವೆ. ಶಿವಸೇನೆಗೆ 124 ಕ್ಷೇತ್ರಗಳು ಮತ್ತು ವಿಧಾನ ಪರಿಷತ್‌ನ 2 ಸ್ಥಾನಗಳು, 14 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಿಗೆ ಅವಕಾಶ ನೀಡಿದ್ದೇವೆ. 164 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಎಂದು ಸಿಎಂ ದೇವೇಂದ್ರ ಫ‌ಡ್ನವಿಸ್‌ ಹೇಳಿದ್ದಾರೆ.

ಶಿವಸೈನಿಕರು ಏನಾದರೂ ಕನಸು ಕಾಣು ತ್ತಿದ್ದರೆ ಅದರಲ್ಲೇನೂ ತಪ್ಪು ಇಲ್ಲ ಎಂದಿ ದ್ದಾರೆ ಫ‌ಡ್ನವಿಸ್‌. ಆದಿತ್ಯ ಠಾಕ್ರೆ ಸಿಎಂ ಆಗಬೇಕು ಎಂದು ಆ ಪಕ್ಷದ ನಾಯಕರು ಬಣ್ಣಿಸಿದ್ದಕ್ಕೆ ಪ್ರತಿಯಾಗಿ ಫ‌ಡ್ನವೀಸ್‌ ಈ ಹೇಳಿಕೆ ನೀಡಿದ್ದಾರೆ. ಏಕನಾಥ ಖಡ್ಸೆ, ವಿನೋದ್‌ ತಾವಡೆಗೆ ಟಿಕೆಟ್‌ ನೀಡದೇ ಇರುವ ಬಗ್ಗೆ ಹೇಳಿದ ಅವರು, ಪಕ್ಷದ ಕೆಲಸಕ್ಕಾಗಿ ಅವರನ್ನು ನಿಯೋಜಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ನಾಮಪತ್ರ ಸಲ್ಲಿಕೆ: ಮಹಾರಾಷ್ಟ್ರ ಚುನಾವಣೆ ನಾಮಪತ್ರ ಸಲ್ಲಿಕೆಯ ಕೊನೇ ದಿನವಾದ ಶುಕ್ರವಾರ ಸಿಎಂ ಫ‌ಡ್ನವೀಸ್‌, ಶಿವಸೇನೆಯ ಏಕನಾಥ್‌ ಶಿಂದೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಸೇರಿದಂತೆ ಹಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಫ‌ಡ್ನವೀಸ್‌ಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಾಥ್‌ ನೀಡಿದ್ದರು. ಮತ್ತೂಂದು ಬೆಳವಣಿಗೆಯಲ್ಲಿ, ಬಿಜೆಪಿಯು 7 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಹಿರಿಯ ನಾಯಕರಾದ ಏಕನಾಥ್‌ ಖಾಡ್ಸೆ, ವಿನೋದ್‌ ತಾಬ್ಡೆಯವರ ಹೆಸರನ್ನೇ ಕೈಬಿಟ್ಟಿದೆ. ಏಕನಾಥ್‌ ಬದಲಿಗೆ ಅವರ ಪುತ್ರಿ ರೋಹಿಣಿಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ಸೋಲು ಖಚಿತ: ನಿರುಪಮ್‌
ಕಾಂಗ್ರೆಸ್‌ ವಿರುದ್ಧ ಟೀಕೆ ಮುಂದುವರಿಸಿರುವ ಅದೇ ಪಕ್ಷದ ನಾಯಕ ಸಂಜಯ್‌ ನಿರುಪಮ್‌ ಶುಕ್ರವಾರ ಮಾತನಾಡಿ, ಮುಂಬಯಿನಲ್ಲಿ 2-3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆಯೂ ಕಾಂಗ್ರೆಸ್‌ ಸೋಲು ನಿಶ್ಚಿತ ಎಂದಿದ್ದಾರೆ.

Advertisement

ಎಮ್ಮೆನ್ನೆಸ್‌ಗೆ ಕೈ-ಎನ್‌ಸಿಪಿ ಬೆಂಬಲ:
ಪುಣೆ ಸಿಟಿಯ ಕೊಥ್ರೂಡ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ್‌ ಪಾಟೀಲ್‌ರನ್ನು ಸೋಲಿಸಲು ಪಣತೊಟ್ಟಿರುವ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟ, ಈ ಕ್ಷೇತ್ರದಲ್ಲಿ ಎಂಎನ್‌ಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಎಂಎನ್‌ಎಸ್‌ನಿಂದ ಇಲ್ಲಿ ಕಿಶೋರ್‌ ಶಿಂದೆ ಕಣಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next