Advertisement

ಮಹಾರಾಷ್ಟ್ರ ರೈತರಿಗೆ 2 ಲಕ್ಷ ರೂ.ಸಾಲಮನ್ನಾ

10:25 AM Dec 22, 2019 | Team Udayavani |

ನಾಗ್ಪುರ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರಕಾರವು 2 ಲಕ್ಷ ರೂ.ವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

Advertisement

ವಿಧಾನಸಭೆ ಕಲಾಪದಲ್ಲಿ ಶನಿವಾರ ಸಾಲ ಮನ್ನಾ ಯೋಜನೆಯನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, 2019ರ ಸೆಪ್ಟಂಬರ್‌ 30ರ ವರೆಗೆ ಅನ್ವಯ ಆಗುವಂತೆ ಎಲ್ಲ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುವುದು. ಇದಕ್ಕೆ “ಮಹಾತ್ಮ ಜ್ಯೋತಿರಾವ್‌ ಫ‌ುಲೆ ಸಾಲಮನ್ನಾ ಯೋಜನೆ’ ಎಂದು ಹೆಸರಿಡಲಾಗುವುದು. ಅಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೂ ಕಾರ್ಯಕ್ರಮ ರೂಪಿಸುವುದಾಗಿ ಭರವಸೆ ನೀಡಿದ್ದಾರೆ.

ರೈತರಿಗೆ ದ್ರೋಹ
ಸಾಲಮನ್ನಾ ಯೋಜನೆಯು ರೈತರಿಗೆ ಎಸಗಿದ ದ್ರೋಹವಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ವಿಪಕ್ಷ ನಾಯಕ ದೇವೇಂದ್ರ ಫ‌ಡ್ನವೀಸ್‌ ಎಚ್ಚರಿಕೆ ನೀಡಿದ್ದಾರೆ.

2017ರಲ್ಲಿ ಬಿಜೆಪಿ ನೇತೃತ್ವದ ಸರಕಾರವು 1.5 ಲಕ್ಷ ರೂ.ವರೆಗೆ ಸಾಲಮನ್ನಾ ಮಾಡಿತ್ತು. 2017 ಹಾಗೂ 2019ರ ಅವಧಿಯಲ್ಲಿ ರಾಜ್ಯದ ಬಹುತೇಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಕೆಲವೇ ರೈತರು ಮಾತ್ರ ಇದರಿಂದ ಹೊರಗುಳಿದಿದ್ದಾರೆ. ಆದರೆ ಈಗ ಪ್ರಕಟಿಸಿರುವ ಸಾಲಮನ್ನಾ ಯೋಜನೆಯಿಂದ ರೈತರಿಗೆ ಯಾವುದೇ ಉಪಯೋಗ ಆಗುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next