Advertisement

Maharashtra: ಇಂಡಿಯಾ ಒಕ್ಕೂಟದ 39 ಸ್ಥಾನ ಹಂಚಿಕೆ ಫೈನಲ್‌?

01:06 AM Feb 24, 2024 | Team Udayavani |

ಮುಂಬಯಿ: ಲೋಕಸಭೆ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿ ದಂತೆ ಇಂಡಿಯಾ ಒಕ್ಕೂಟದ ಪಕ್ಷಗಳ ನಡುವೆ ಮಾತುಕತೆ ಬಿರುಸು ಪಡೆದುಕೊಂಡಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎನ್‌ಸಿಪಿ(ಶರದ್‌ ಬಣ) ವರಿಷ್ಠ ಶರದ್‌ ಪವಾರ್‌ ಮತ್ತು ಶಿವಸೇನೆಯ ಉದ್ಧವ್‌ ಠಾಕ್ರೆ ಅವರಿಗೆ ಫೋನ್‌ ಕರೆ ಮಾಡಿ, ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟು 48ರ ಪೈಕಿ 39 ಕ್ಷೇತ್ರಗಳ ಸ್ಥಾನ ಹಂಚಿಕೆ ಕುರಿತು ಕಾಂಗ್ರೆಸ್‌, ಪವಾರ್‌, ಉದ್ಧವ್‌ ಬಣ ಮತ್ತು ಪ್ರಕಾಶ್‌ ಅಂಬೇಡ್ಕರ್‌ ನಡುವೆ ಮಾತುಕತೆ ಅಂತಿಮ ಗೊಂಡಿದೆ. 27, 28ರಂದು ಮುಂಬಯಿಯಲ್ಲಿ ಈ ಪಕ್ಷಗಳ ಸಭೆ ನಡೆಯಲಿದ್ದು, ಈ ವೇಳೆ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

Advertisement

ಎನ್‌ಸಿಪಿ ಶರದ್‌ ಬಣಕ್ಕೆ “ಕಹಳೆ ಊದುತ್ತಿರುವ ವ್ಯಕ್ತಿ’ಯ ಚಿಹ್ನೆ
ಶರದ್‌ ಪವಾರ್‌ ಬಣದ ನ್ಯಾಶನಲ್‌ ಕಾಂಗ್ರೆಸ್‌ ಪಕ್ಷಕ್ಕೆ(ಎನ್‌ಸಿಪಿ) “ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಚುನಾವಣ ಆಯೋಗ ಮಂಜೂರು ಮಾಡಿದೆ. ಮುಂದಿನ ಚುನಾವಣೆಯಲ್ಲಿ ಈ ಬಣದ ಅಭ್ಯರ್ಥಿಗಳು ಈ ಚಿಹ್ನೆಯ ಅಡಿ ಸ್ಪರ್ಧಿಸಲಿದ್ದಾರೆ. “ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸದ ಪ್ರತೀಕವಾಗಿದ್ದ ಕಹಳೆಯು, ಅಂದು ದಿಲ್ಲಿಯ ದೊರೆಗಳ ಸದ್ದಡಗಿಸಿತ್ತು. ಈಗ ಮೊತ್ತೂಮ್ಮೆ ದಿಲ್ಲಿಯಲ್ಲಿ ಆಳ್ವಿಕೆ ನಡೆಸುತ್ತಿರುವವರ ಸದ್ದಡಗಿಸಲು ಶರದ್‌ ಪವಾರ್‌ ನಾಯಕತ್ವದಲ್ಲಿ ಕಹಳೆ ಮೊಳಗಲಿದೆ’ ಎಂದು ಪಕ್ಷ ಎಕ್ಸ್‌ ಮಾಡಿದೆ.

ಕಾಶ್ಮೀರ: 3:3 ಫಾರ್ಮುಲಾಗೆ ಮನವಿ
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಏಕಾಂಗಿ ಸ್ಪರ್ಧೆಯ ಘೋಷಣೆ ಮಾಡಿದ್ದ ನ್ಯಾಶನಲ್‌ ಕಾನ್ಫರೆನ್ಸ್‌(ಎನ್‌ಸಿ)ನ ಫಾರೂಕ್‌ ಅಬ್ದುಲ್ಲಾರ ಮನವೊಲಿಸಲು ಕಾಂಗ್ರೆಸ್‌ ಮುಂದಾಗಿದೆ. ಇಲ್ಲಿ ಒಟ್ಟು 6 ಲೋಕಸಭೆ ಕ್ಷೇತ್ರಗಳಿವೆ. ಮೈತ್ರಿ ಉಳಿಸಿಕೊಳ್ಳುವ ಸಲು ವಾಗಿ 3 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ, ಉಳಿದ 3ರಲ್ಲಿ ಎನ್‌ಸಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ಮನವಿ ಮಾಡಿದೆ. ಆದರೆ ಎನ್‌ಸಿ ಇನ್ನೂ ಯಾವುದೇ ನಿರ್ಧಾ ರಕ್ಕೆ ಬಂದಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next