Advertisement

Maharashtra: 6 ತಿಂಗಳುಗಳಲ್ಲಿ 1,267 ರೈತರ ಆತ್ಮಹತ್ಯೆ

01:07 AM Jul 22, 2024 | Team Udayavani |

ಮುಂಬಯಿ: ವರ್ಷದ ಮೊದಲಾರ್ಧ ಅಂತ್ಯವಾಗುವುದ ರೊಳಗೆ ಮಹಾರಾಷ್ಟ್ರದಲ್ಲಿ 1,267 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪಾರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ವರದಿ ಹೇಳಿದೆ. ಈ ಪೈಕಿ ವಿದರ್ಭ ಪ್ರಾಂತದಲ್ಲೇ ಅತೀ ಹೆಚ್ಚು ಅಂದರೆ 557 ಅನ್ನ ದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಛತ್ರಪತಿ ಸಾಂಭಾಜಿ ನಗರ್‌ನಲ್ಲಿ 430, ನಾಸಿಕ್‌ 137, ನಾಗಪುರದಲ್ಲಿ 130 ರೈತರು ಸಾವನ್ನಪ್ಪಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಸಾವಿನ ಪ್ರಮಾಣ 0.3 ಶೇ. ಹೆಚ್ಚಾಗಿದೆ ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next