Advertisement

ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ20: ಇಂದು ಹರಾಜು

10:54 AM Jul 22, 2023 | Team Udayavani |

ಬೆಂಗಳೂರು: ಮಹಾರಾಜ ಟ್ರೋಫಿಗಾಗಿ ನಡೆಯುವ ಕೆಎಸ್‌ ಸಿಎ ಟಿ20 ಕೂಟಕ್ಕಾಗಿ ಶನಿವಾರ ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ.

Advertisement

ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಮನೀಶ್‌ ಪಾಂಡೆ ಸೇರಿದಂತೆ 700 ಕ್ರಿಕೆಟಿಗರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.

ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್‌ ಗುಲ್ಬರ್ಗ್‌ ಮಿಸ್ಟಿಕ್ಸ್‌, ರನ್ನರ್‌ ಅಪ್‌ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.

ಪ್ರತಿಯೊಂದು ಫ್ರಾಂಚೈಸಿ 50 ಲಕ್ಷ ರೂ. ಹೊಂದಿದ್ದು ಕನಿಷ್ಠ 16 ಆಟಗಾರರನ್ನು ಖರೀದಿಸಬೇಕಾಗುತ್ತದೆ ಮತ್ತು ತಂಡದ ಸಾಮರ್ಥಯವು 18 ವಿರಾಟ್‌ ಕೊಹ್ಲಿ ಆಟಗಾರರನ್ನು ಮೀರಬಾರದು.

Advertisement

Udayavani is now on Telegram. Click here to join our channel and stay updated with the latest news.

Next