Advertisement

ಮಹಾರಾಜ ಟಿ20 ಕೂಟ: ಮಂಗಳೂರಿಗೆ ಮೊದಲ ಸೋಲು

10:33 PM Aug 11, 2022 | Team Udayavani |

ಮೈಸೂರು: ಗುರುವಾರ ನಡೆದ ಮಹಾರಾಜ ಟಿ20 ಕೂಟದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡ 35 ರನ್‌ಗಳಿಂದ ಮಂಗಳೂರು ಯುನೈಟೆಡ್‌ ತಂಡವನ್ನು ಸೋಲಿಸಿದೆ.

Advertisement

ಬೆಂಗಳೂರು ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿತು. ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದಾಗ ಮಂಗಳೂರು 17.4 ಓವರ್‌ಗಳಲ್ಲಿ 7ಕ್ಕೆ 129 ರನ್‌ ಮಾಡಿತ್ತು. ಪಂದ್ಯ ಮತ್ತೆ ಮುಂದುವರಿಯಲಿಲ್ಲ. ಡಿ-ಎಲ್‌ ನಿಯಮದಂತೆ ಆಗ ಮಂಗಳೂರು 165 ರನ್‌ ಗಳಿಸಬೇಕಿತ್ತು. ಇದು ಮಂಗಳೂರಿಗೆ ಎದುರಾದ ಮೊದಲ ಸೋಲು.

ಬೆಂಗಳೂರು ಪರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಎಲ್‌. ಚೇತನ್‌ 39 ಎಸೆತಗಳಲ್ಲಿ 66 ರನ್‌ ಹೊಡೆದರು. ನಾಯಕ ಮಾಯಾಂಕ್‌ ಅಗರ್ವಾಲ್‌ ಗಳಿಕೆ 20 ಎಸೆತಗಳಿಂದ 44 ರನ್‌. ಮಂಗಳೂರು ಪರ ಮ್ಯಾಕ್‌ನೀಲ್‌ ನೊರೊನ್ಹಾ 50 ರನ್‌ ಹೊಡೆದರು. ಬೆಂಗಳೂರಿನ ರಿಷಿ ಬೋಪಣ್ಣ 19ಕ್ಕೆ 4 ವಿಕೆಟ್‌ ಕೆಡವಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next