Advertisement

ಮಹಾಮೈತ್ರಿ ಸೀಟು ಹಂಚಿಕೆ: ಜೈಲಲ್ಲಿ ನಡೆಯಿತು ಚರ್ಚೆ!

12:30 AM Dec 30, 2018 | Team Udayavani |

ಹೊಸದಿಲ್ಲಿ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಹಾಗೂ ಮಹಾ ಘಟಬಂಧನ್‌ಗೆ ಹೊಸದಾಗಿ ಸೇರ್ಪಡೆಯಾದ ಮುಕೇಶ್‌ ಸಾಹಿ° ಅವರು ಶನಿವಾರ ರಾಂಚಿಯ ಜೈಲಿಗೆ ಹೋಗಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರೊಂದಿಗೆ ಬಿಹಾರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಕುರಿತು ಚರ್ಚಿಸಿದ್ದಾರೆ. ಬಿಹಾರದ ಮಹಾಮೈತ್ರಿಯಲ್ಲಿ ಲಾಲು ಪಾತ್ರವೇ ಮುಖ್ಯವಾಗಿರುವ ಕಾರಣ, ಅವರೊಂದಿಗೆ ಸಭೆ ನಡೆಸಿ, ಸೀಟು ಹಂಚಿಕೆ ಕುರಿತು ಚರ್ಚಿಸಲಾಯಿತು. ಸದ್ಯದಲ್ಲೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವೇಳೆ, ರಾಂಚಿ ಜೈಲಲ್ಲಿ ಸೀಟು ಹಂಚಿಕೆ ಮಾತುಕತೆ ನಡೆದ ಬಗ್ಗೆ ಜೆಡಿಯು ವ್ಯಂಗ್ಯವಾಡಿದೆ.

Advertisement

ಎನ್‌ಡಿಎ ಬಿಡಲ್ಲ: ಈ ನಡುವೆ, ಉತ್ತರಪ್ರದೇಶದಲ್ಲಿ ಎನ್‌ಡಿಎ ಮಿತ್ರಪಕ್ಷವಾಗಿರುವ ಅಪ್ನಾ ದಲ್‌ (ಸೊನೆವಾಲ್‌) ಮೈತ್ರಿ ಮುರಿ ಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನರೇಂದ್ರ ಮೋದಿಯವರೇ ನಮ್ಮ ನಾಯಕ. ನಾವು ಮೋದಿ ಕ್ಷೇತ್ರವಾದ ವಾರಾಣಸಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದೂ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next