Advertisement

ಬಾಕಿ ವೇತನ ನೀಡಲು ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಲ ಆಗ್ರಹ

08:47 PM Jul 07, 2022 | Team Udayavani |

ಬೆಂಗಳೂರು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 189 ಸಿಬಂದಿಗೆ ಮೂರು ವರ್ಷಗಳ ವೇತನ ಬಾಕಿಯಿದ್ದು, ಅದನ್ನು ಕೂಡಲೇ ನೀಡಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಲ ಆಗ್ರಹಿಸಿದೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಜಿ.ಆರ್‌. ಶಿವಶಂಕರ್‌, ರಾಜ್ಯದ 21 ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 189 ಸಿಬಂದಿಗೆ ಬಾಕಿ ಇರುವ  ವೇತನವನ್ನು ನೀಡಬೇಕು ಹಾಗೂ ಸ್ಥಗಿತಗೊಳಿಸಿರುವ ತರಬೇತಿ ಕೇಂದ್ರಗಳನ್ನು ಪುನರ್‌ ಆರಂಭಿಸಬೇಕು. ಸರಕಾರವು ಹೊಸ ಕೇಂದ್ರಗಳನ್ನು ಆರಂಭಿಸುವುದಾದರೆ, ಈಗಿರುವ ಸಿಬಂದಿಯನ್ನೇ ನೇಮಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಮಾಡಿದರು.

ತಮ್ಮ ಬೇಡಿಕೆಗಳ ಬಗ್ಗೆ  15 ದಿನಗಳ ಒಳಗೆ ನಿರ್ಧರಿಸದಿದ್ದಲ್ಲಿ   ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next