Advertisement

ಬೆಂಗಳೂರಿನಲ್ಲಿ “ಮಹಾ” ಪ್ರತಿಭಟನೆ ವಾಪಸ್; ಮತ್ತೆ ನರಗುಂದದಲ್ಲಿ ಹೋರಾಟ

06:14 PM Dec 27, 2017 | Team Udayavani |

ಬೆಂಗಳೂರು: ಕಳೆದ ಶನಿವಾರದಿಂದ ಬಿಜೆಪಿ ಕಚೇರಿ ಮುಂದೆ ಅಹೋರಾತ್ರಿ  ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಧರಣಿ ನಡೆಸುತ್ತಿದ್ದ ರೈತರು ಬುಧವಾರ ಪಾದಯಾತ್ರೆ ಮೂಲಕ ರಾಜಭವನ, ಚುನಾವಣಾ ಆಯೋಗ, ಸಿಎಂ ಕಚೇರಿಗೆ ಹಾಗೂ ಜೆಡಿಎಸ್ ಕಚೇರಿಗೆ ಮನವಿ ಸಲ್ಲಿಸುವ ಮೂಲಕ ಬೆಂಗಳೂರಿನಲ್ಲಿ ಪ್ರತಿಭಟನೆ ವಾಪಸ್ ಪಡೆದುಕೊಂಡಿರುವುದಾಗಿ ಮಹದಾಯಿ ಹೋರಾಟ ಸಮಿತಿ ತಿಳಿಸಿದೆ.

Advertisement

ಮನವಿ ಸಲ್ಲಿಕೆಯ ಬಳಿಕ ಫಿಲಂ ಛೇಂಬರ್ ನಲ್ಲಿ ಕನ್ನಡ ಚಿತ್ರರಂಗದ ಗಣ್ಯರ ಜತೆ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿರುವುದರಿಂದ ಮತ್ತಷ್ಟು ಬಲಬಂದಂತಾಗಿದೆ. ಈ ಹಿಂದೆಯೂ ಚಿತ್ರರಂಗ ನಮಗೆ ಬೆಂಬಲ ನೀಡಿತ್ತು. ಅಲ್ಲದೇ ಇಂದು ಬೆಂಗಳೂರಿನಲ್ಲಿ ಮಹದಾಯಿ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದರು. ಜನವರಿಯಲ್ಲಿ ನರಗುಂದದಲ್ಲಿ ಮತ್ತೆ ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದರು.

ರೈತ ಪ್ರತಿಭಟನಾಕಾರರೆಲ್ಲ ಇಂದೇ ಊರಿಗೆ ಮರಳಲಿದ್ದಾರೆ, ಆದರೆ ರೈತ ಮುಖಂಡರಾದ ನಾವು ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಸಿ ಗುರುವಾರ ವಾಪಸ್ ಊರಿಗೆ ತೆರಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next