Advertisement

ಮಹದಾಯಿ: ಪರಿಕ್ಕರ್‌ ರಿಂದ ಸಣ್ಣತನದ ರಾಜಕಾರಣ

05:32 PM Dec 24, 2017 | Team Udayavani |

ಕುಣಿಗಲ್‌: ಮಹದಾಯಿ ನೀರನ್ನು ರಾಜ್ಯಕ್ಕೆ ಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಪರಿಕ್ಕರ್‌ ಪತ್ರ ಬರೆಯುವ ಮೂಲಕ ಸಣ್ಣತನದ ರಾಜಕಾರಣ ಪ್ರದರ್ಶಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಕಿಡಿಕಾರಿದರು.

Advertisement

ಪಟ್ಟಣದಲ್ಲಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರಾಗಿ ಬೀಸುವ ಕಲ್ಲಿಗೆ ರಾಗಿ ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರ ಅಗತ್ಯವಿರಲಿಲ್ಲ: ಮಹದಾಯಿ ನೀರಿಗಾಗಿ ಒತ್ತಾಯಿಸಿ ಆ ಭಾಗದ ರೈತರು ಕಳೆದ 843 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸ್ಪಂದಿಸದ ಗೋವಾ ಸರ್ಕಾರ, ಈಗ ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದ್ದ ರಿಂದ ರಾಜಕೀಯ ಲಾ¸‌ ಪಡೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದರು.

ಗೋವಾ ಮುಖ್ಯಮಂತ್ರಿ ಪರಿಕ್ಕರ್‌ ಮತ್ತು ಯಡಿಯೂರಪ್ಪ ಅವರ ರಾಜಕೀಯ ದೊಂಬರಾಟವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ನೀರು ಕೊಡುವ ಭರವಸೆ ನೀಡುವ ಪತ್ರ ನೀಡಿದ ತಕ್ಷಣ ರಾಜ್ಯಕ್ಕೆ ಪರಿಕ್ಕರ್‌ ನೀರು ಹರಿಸುತ್ತಾರೆಯೇ? ಹಾಗಿದ್ದರೆ ಅವರು ಕಾನೂನಿನ ಪ್ರಕಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏತಕ್ಕಾಗಿ ಪತ್ರ ಬರೆದು ತಿಳಿಸಲಿಲ್ಲ ಎಂದು ಪ್ರಶ್ನಿಸಿದರು.

ದಿಕ್ಕು ತಪ್ಪಿಸುವ ಯತ್ನ: ಯಡಿಯೂರಪ್ಪ ಅವರಿಗೆ ಇಂತಹ ನೂರು ಪತ್ರಗಳನ್ನು ಪರಿಕ್ಕರ್‌ ಬರೆದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ಜನರನ್ನು ದಿಕ್ಕು ತಪ್ಪಿಸಲು ಮಾಡುತ್ತಿರುವ ರಾಜಕೀಯ ಗಿಮಿಕ್‌ ಇದು ಎಂದು ಅವರು ಲೇವಡಿ ಮಾಡಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲು ವಿಫ‌ಲವಾಗಿವೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಗಮನವಿಲ್ಲ. ಅದೇನಿದ್ದರೂ ಕಾರ್ಪೊರೇಟ್‌ ಕುಳಗಳ ಪರವಾದ ನಿಲುವು ಎಂದು ಅವರು ಆರೋಪಿಸಿದರು.

ರೈತ ಸಂಘ ಗೆಲ್ಲಿಸಿ: ಮುಂಬರುವ ಚುನಾವಣೆಯಲ್ಲಿ ಕನಿಷ್ಟ 10-15 ರೈತ ಸಂಘದ ಶಾಸಕರನ್ನು ಗೆಲ್ಲಿಸಿದರೆ ಸರ್ಕಾರವನ್ನು ಅಲುಗಾಡಿಸುತ್ತೇವೆ. ತುಮಕೂರು ಜಿಲ್ಲೆಯ ಕುಣಿಗಲ್‌ ಮತ್ತು ಚಿಕ್ಕನಾಯಕನಹಳ್ಳಿ ಯಿಂದ ರೈತ ಸಂಘದ ಶಾಸಕರನ್ನು ಗೆಲ್ಲಿಸಿಕೊಡುವಂತೆ ಅವರು ಮನವಿ ಮಾಡಿದರು.

ಈ ದೇಶದಲ್ಲಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಪದ್ಮ ಭೂಷಣ ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ಆದರೆ, ಇಡೀ ದೇಶಕ್ಕೆ ಅನ್ನ ಹಾಕುತ್ತಿರುವ ಉತ್ತರ ರೈತರಿಗೆ ಯಾವ ಪ್ರಶಸ್ತಿಗಳನ್ನೂ ನೀಡುತ್ತಿಲ್ಲ. ಸರ್ಕಾರ ಈ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. 

ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌, ಸಂಘದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್‌, ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್‌, ಜಿಲ್ಲಾ ಗೌರವಾಧ್ಯಕ್ಷ ಧನಂಜಯಾರಾಧ್ಯ, ಹುಣಸೂರು ಘಟಕದ ತಾಲೂಕು ಅದ್ಯಕ್ಷ ಬೆಟ್ಟೇಗೌಡ, ವಿದ್ಯಾರ್ಥಿ ರೈತ ಸಂಘದ ಅಧ್ಯಕ್ಷ ಲಕ್ಷ್ಮಣ್‌ಗೌಡ, ಚಕ್ರವರ್ತಿ ಲೋಕೇಶ್‌, ಕಾರ್ಯದರ್ಶಿ ವೆಂಕಟೇಶ್‌, ರಮೇಶ್‌, ದಿವಂಗತ ಡಿ.ಕೆ.ರವಿ ತಂದೆ ಕರಿಯಪ್ಪ, ತಾಯಿ ಗೌರಮ್ಮ ಮತ್ತಿತರರು ಹಾಜರಿದ್ದರು.

ಮಧುಗಿರಿಯಲ್ಲಿ ರೈತ ದಿನಾಚರಣೆ
ಮಧುಗಿರಿ: ಪ್ರಸ್ತುತ ರೈತರು ಅನುಭವಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ರೈತಸಂಘ ಮಾತ್ರ ಶ್ರಮಿಸುತ್ತಿದ್ದು, ರಾಷ್ಟ್ರೀಯ ಪಕ್ಷಕ್ಕೆ ಸೀಮಿತರಾದ ನಾವುಗಳು ಇಂದು ರೈತರ ಸಮಸ್ಯೆಯ ಬಗ್ಗೆ ಮಾತಾಡಲು ಆಗುತ್ತಿಲ್ಲ ಎಂದು ಜಿ.ಪಂ. ಸದಸ್ಯ ಜಿ.ಜೆ.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ, ತಾಪಂ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಮಾಜಿಪ್ರಧಾನಿ ದಿ.ಚೌದರಿ ಚರಣ್‌ಸಿಂಗ್‌ ಜಯಂತಿಯ ಅಂಗವಾಗಿ ನಡೆದ ರೈತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾವು ರಾಷ್ಟ್ರೀಯ ಪಕ್ಷದವರಾಗಿದ್ದು ರೈತರ ಸಮಸ್ಯೆ ಪರಿಹರಿಸಲು ಅಸಹಾಯಕರಾಗಿದ್ದೇವೆ.

ತಾಲೂಕಿನಲ್ಲಿ ರೈತರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್‌ ಕಂಬಗಳ ಪ್ರಕರಣಕ್ಕೆ ಪರಿಹಾರ ಕೊಡಿಸಲು ನಮ್ಮಿಂದಾಗಲಿಲ್ಲ. ಆದರೆ ರೈತಸಂಘ ಹೋರಾಟದಿಂದ ಈಗಾಗಲೇ ರೂ.5 ಕೋಟಿಯಷ್ಟು ಹಣವನ್ನು ರೈತರಿಗೆ ಕೊಡಿಸಿದ್ದು ಸಾಮಾನ್ಯ ಕೆಲಸವಲ್ಲ. ರೈತರು ಸಹ ಪುರಾತನ ಬೆಳೆ ಪದ್ದತಿಗೆ ಮಾರುಹೋಗದೆ ಸಾವಯವ ಪದ್ದತಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು, ಆರ್ಥಿಕವಾಗಿ ಅಭಿವೃದ್ದಿಯಾಗಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ್‌ ಪ್ರಾಸ್ತಾವಿಕವಾಗಿ ಮಾತಾಡಿ, ಪ್ರಸ್ತುತ ವರ್ಷದಿಂದ ಸಿರಿಧಾನ್ಯ ಬೆಳೆಯಲು ಹಾಗೂ ಕಟಾವು ಮಾಡಲು ಎಕರಗೆ 2500 ಸಾವಿರ ಸಹಾಯಧನ ನೀಡಲು ಉದ್ದೇಶಿಸಿದೆ. ತಾಲೂಕಿನಲ್ಲಿ 500 ಹೆಕ್ಟೇರ್‌ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, ರೈತರಿಗೆ ವಿವಿಧ ಅನುದಾನದಲ್ಲಿ ರೂ.5 ಲಕ್ಷದವರೆಗೂ ಸಹಾಯಧನ ಲಭ್ಯ. ತಾಲೂಕಿನ 3 ಹೋಬಳಿಯಲ್ಲಿ ಕೃಷಿಯಂತ್ರಧಾರೆ ಸ್ಥಾಪಿಸಿ ಯಂತ್ರಗಳನ್ನು ಬಾಡಿಗೆ ನೀಡಲಾಗುತ್ತಿದೆ ಎಂದರು. 

 ಕಾರ್ಯಕ್ರಮದಲ್ಲಿ ರೇಷ್ಮೇ, ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಗಳ ಸೌಲಭ್ಯಗಳ ಕುರಿತು ಆಯಾ ಅಧಿಕಾರಿಗಳು ಮಾಹಿತಿ ನೀಡಿದರು. 15 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದ ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಪ್ಪನವರನ್ನು ಸನ್ಮಾನಿಸಲಾಯಿತು.

ತಾ.ಪಂ. ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ, ಸದಸ್ಯ ದೊಡ್ಡಯ್ಯ, ಗೋಪಾಲಯ್ಯ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ರಂಗಸ್ವಾಮಿ, ತಾಲೂಕು ಅಧ್ಯಕ್ಷ ಗೋವಿಂದರೆಡ್ಡಿ, ಸದಸ್ಯ ಮುದ್ದಹರಿಯಪ್ಪ, ರೈತಸಂಘದ ದೊ

Advertisement

Udayavani is now on Telegram. Click here to join our channel and stay updated with the latest news.

Next