Advertisement

ಮಹಾರಾಷ್ಟ್ರ : ರೈತರ ಸಂಪೂರ್ಣ ಕೃಷಿ ಸಾಲ ಮನ್ನಾಕ್ಕೆ ವಿಪಕ್ಷ ಆಗ್ರಹ, ಪ್ರತಿಭಟನೆ

09:01 AM Jun 19, 2019 | Sathish malya |

ಮುಂಬಯಿ : ರಾಜ್ಯದಲ್ಲಿ ತೀವ್ರ ಕೃಷಿ ಬಿಕ್ಕಟ್ಟು ಇರುವುದರಿಂದ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಶಾಸಕರು ಇಂದು ನಿರಂತರ ಎರಡನೇ ದಿನವೂ ರಾಜ್ಯ ವಿಧಾನಸಭೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಾಂಗ್ರೆಸ್‌ ನಾಯಕರಾದ ಪೃಥ್ವಿರಾಜ್‌ ಚವಾಣ್‌, ಬಾಳಾಸಾಹೇಬ್‌ ಥೋರಟ್‌ ಮತ್ತು ಎನ್‌ಸಿಪಿಯ ಅಜಿತ್‌ ಪವಾರ್‌ ಮತ್ತು ಧನಂಜಯ ಮುಂಢೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರು.

ರಾಜ್ಯದಲ್ಲಿನ ಕೃಷಿ ಬಿಕ್ಕಟ್ಟಿಗೆ ಸ್ಪಂದಿಸದ ಮತ್ತು ರೈತರ ಕೃಷಿ ಸಾಲ ಮನ್ನಾ ಮಾಡುವ ಬೇಡಿಕೆಯನ್ನು ಆಲಿಸದ ರಾಜ್ಯ ಸರಕಾರ ಕಿವುಡ ಸರಕಾರವೆಂಬ ಘೋಷಣೆಯನ್ನು ವಿರೋಧ ಪಕ್ಷಗಳ ಶಾಸಕರು ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next