Advertisement

ಮಹಾರಾಷ್ಟ್ರದ ವಿಧಾನ ಭವನ, ಸಚಿವಾಲಯ ಉಗ್ರರ ಟಾಪ್‌ ಟಾರ್ಗೆಟ್‌ ?

03:47 PM Jul 24, 2017 | Team Udayavani |

ಮುಂಬಯಿ : ಮಹಾರಾಷ್ಟ್ರದ ವಿಧಾನ ಭವನ, ಸಚಿವಾಲಯ ಕಟ್ಟಡ ಉಗ್ರರ ಟಾಪ್‌ ಟಾರ್ಗೆಟ್‌ಗಳಾಗಿವೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್‌ ಅಧ್ಯಕ್ಷ ರಾಮರಾಜೆ ನಿಂಬಾಳ್ಕರ್‌ ಶಾಸಕರನ್ನು ಹಾಗೂ ಸಚಿವರನ್ನು ಎಚ್ಚರಿಸಿದ್ದಾರೆ. 

Advertisement

ಮಹಾರಾಷ್ಟ್ರ ವಿಧಾನ ಭವನ ಮತ್ತು ಸಚಿವಾಲಯ ಕಟ್ಟಡಗಳಿಗೆ ಉಗ್ರ ಬೆದರಿಕೆ ಇರುವುದರಿಂದ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ ಸಚಿವರು, ಶಾಸಕರು ತಮ್ಮ ಸಿಬಂದಿಗಳು ಮತ್ತು ಸಹಾಯಕರ ಹಾಗೂ ತಮ್ಮನ್ನು ಕಾಣಲು ಬರುವ ಪಕ್ಷ ಕಾರ್ಯಕರ್ತರ ಭದ್ರತಾ ತಪಾಸಣೆಗೆ ಅಡ್ಡಿ ಪಡಿಸದೆ ಸಹಕರಿಸಬೇಕು ಎಂದವರು ಹೇಳಿದ್ದಾರೆ. 

ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಇಂದು ಆರಂಭಗೊಂಡ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. 

ವಿಧಾನ ಭವನ ಮತ್ತು ಮಂತ್ರಾಲಯ ಕಟ್ಟಡಗಳಿಗೆ ಗರಿಷ್ಠ ಭದ್ರತೆ ಒದಗಿಸಲು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next