Advertisement

ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ: ಎಂ.ಕೆ.ಪ್ರಾಣೇಶ್ ಭೇಟಿ

02:42 PM Oct 08, 2021 | Team Udayavani |

ಮೂಡಿಗೆರೆ:ಪ್ರವಾಸೋದ್ಯಮ ಇಲಾಖೆ  ಸಚಿವರಾಗಿದ್ದಾಗ ಸಿ.ಟಿ.ರವಿ ಅವರು ಜಾವಳಿ ಹೇಮಾವತಿ ನದಿ ಮೂಲ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 50 ಲಕ್ಷ ಅನುಧಾನವನ್ನು ನೀಡಿದ್ದರು, ಇಂದು ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದ್ದು ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು.

Advertisement

ಇದನ್ನೂ ಓದಿ:ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರ ಬೇಜವಾಬ್ದಾರಿ, ಪ್ರವಾಸಿಗರ ವಿರುದ್ಧ ಪ್ರವಾಸಿಗರೇ ಕಿಡಿ

ನಂತರ ಮಾತನಾಡಿದ ಅವರು ಹೇಮಾವತಿ ನದಿ ರಾಜ್ಯದ ರೈತರಿಗೆ ಜೀವನಾಡಿ ಆಗಿದ್ದು ,ಈ ನದಿ ನಮ್ಮ ತಾಲೂಕಿನಲ್ಲಿ ಉಗಮವಾಗುತ್ತಿರುವುದು ನಮ್ಮ ಹೆಮ್ಮೆ, ಈ ಸ್ಥಳ ಬಹಳ ದೊಡ್ಡ ಪ್ರವಾಸಿಗರ ತಾಣವಾಗಲಿದೆ,ಮುಂದೆಯೂ ಸಹ ಈ ಸ್ಥಳಕ್ಕೆ ಸರ್ಕಾರದಿಂದ ಅನುದಾನ ಕೊಡಿಸುತ್ತೆನೆ ಎಂದರು.

ದೇವಸ್ಥಾನದ ಕಾರ್ಯದರ್ಶಿ ಜಗದೀಶ್ ಗೌಡ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಧರ್, ಪರೀಕ್ಷಿತ್ ಜಾವಳಿ,ನಿವ್ರತ್ತ ಉಪತಹಶಿಲ್ದಾರ್ ಗಣಪತಿ ಆಚಾರ್ ಶಶಿಕುಮಾರ್, ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next