Advertisement

ಮುಂಬೈ: “ವಿಧವಾ ಶಾಸ್ತ್ರ’ಕ್ಕೆ 34 ಗ್ರಾಪಂಗಳಿಂದ ಗುಡ್‌ಬೈ!

09:55 AM May 28, 2022 | Team Udayavani |

ಮುಂಬೈ: ಮಹಾರಾಷ್ಟ್ರದ ದಕ್ಷಿಣ ಕೊಲ್ಹಾಪುರ ಅಸೆಂಬ್ಲಿ ಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತ್‌ಗಳೂ ಒಂದು ವಿಶಿಷ್ಟ ಹಾಗೂ ಸುಧಾರಣಾ ಕಾರ್ಯಕ್ಕೆ ಮುಂದಾಗಿವೆ.

Advertisement

ಮಹಿಳೆಯ ಪತಿ ಮೃತಪಟ್ಟರೆ, ಬಲವಂತವಾಗಿ ಆಕೆಯ ಹಣೆಯಲ್ಲಿನ ಸಿಂಧೂರವನ್ನು ತೆಗೆಸುವುದು, ಬಳೆ ಒಡೆಯುವುದು ಮುಂತಾದ ವಿಧವಾ ಶಾಸ್ತ್ರಗಳನ್ನು ನಿರ್ಮೂಲನೆ ಮಾಡುವಂಥ ನಿರ್ಣಯವನ್ನು ಈ ಗ್ರಾಪಂಗಳು ಕೈಗೊಳ್ಳಲಿವೆ.

ಶಿವಾಜಿ ಮಹಾರಾಜರಿಗೆ “ಛತ್ರಪತಿ’ ಎಂಬ ಬಿರುದು ಸಿಕ್ಕ ದಿನವಾದ ಜೂ.6ರಂದು “ಶಿವ ರಾಜ್ಯಾಭಿಷೇಕ ದಿನ’ವೆಂದು ಆಚರಿಸಲಾಗುತ್ತದೆ. ಅಂದೇ 34 ಗ್ರಾಪಂಗಳೂ ವಿಧವಾ ಶಾಸ್ತ್ರವನ್ನು ಬಹಿಷ್ಕರಿಸುವುದಾಗಿ ಶಪಥ ಮಾಡಲಿವೆ ಎಂದು ಇಲ್ಲಿನ ಕಾಂಗ್ರೆಸ್‌ ಶಾಸಕ ರಿತುರಾಜ್‌ ಪಾಟೀಲ್‌ ಹೇಳಿದ್ದಾರೆ.

ಮೊದಲಿಗೆ ಮೇ 4ರಂದು ಕೊಲ್ಹಾಪುರದ ಹೆರ್ವಾಡ್‌ ಗ್ರಾಮದಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next