Advertisement

18 ಶಾಸಕರ ಅನರ್ಹತೆ ಮಾನ್ಯ

10:00 AM Oct 26, 2018 | Karthik A |

ಚೆನ್ನೈ: ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಎಐಎಡಿಎಂಕೆ ಸರಕಾರ ನಿರಾಳವಾದಂತಾಗಿದೆ. ಈ ಹಿಂದೆ ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತಾದರೂ ಜೂ.14ರಂದು ಆಗಿನ ಜಡ್ಜ್ ಇಂದಿರಾ ನೀಡಿದ ತೀರ್ಪನ್ನು ನ್ಯಾಯಪೀಠ ಈಗ ಎತ್ತಿ ಹಿಡಿದಿದೆ. ಜೂ.14ರಂದು ಮದ್ರಾಸ್‌ ಹೈಕೋರ್ಟ್‌ ದ್ವಂದ್ವ ತೀರ್ಪು ನೀಡಿತ್ತು. ಶಾಸಕರ ಅನರ್ಹತೆಗೊಳಿಸಿದ ಸ್ಪೀಕರ್‌ ಧನಪಾಲ್‌ ನಿರ್ಧಾರವನ್ನು ನ್ಯಾ| ಬ್ಯಾನರ್ಜಿ ಅನುಮೋದಿಸಿದ್ದರೆ, ನ್ಯಾ| ಎಂ.ಸುಂದರ್‌ ವ್ಯತಿರಿಕ್ತ ತೀರ್ಪು ನೀಡಿದ್ದರು. ಇದರಿಂದಾಗಿ ನ್ಯಾ| ಎಂ. ಸತ್ಯ ನಾರಾಯಣನ್‌ರನ್ನು ನೇಮಿಸಲಾಗಿತ್ತು. ಈಗ ತೀರ್ಪು ನೀಡಿರುವ ಅವರು, ನ್ಯಾ| ಬ್ಯಾನರ್ಜಿ ನೀಡಿದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.

Advertisement

ಕಳೆದ ವರ್ಷ ಸೆ.18ರಂದು 18 ಎಐಎಡಿಎಂಕೆ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಲಾಗಿತ್ತು. ಈ ಶಾಸಕರು ಎಐಎಡಿಎಂಕೆಯ ಇನ್ನೊಂದು ಬಣದ ಮುಖಂಡ ಟಿಟಿವಿ ದಿನಕರನ್‌ಗೆ ಬೆಂಬಲ ಸೂಚಿಸಿ, ಸಿಎಂ ಪಳನಿಸ್ವಾಮಿ ವಿರುದ್ಧ ಅವಿಶ್ವಾಸಮತ ಕೋರುವಂತೆ ರಾಜ್ಯಪಾಲರನ್ನು ಭೇಟಿಯಾಗಿ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಅನರ್ಹಗೊಳಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next