Advertisement

ಹುಚ್ಚರಯ್ಯಾ ಹುಚ್ಚರು ನಾಟಕ ಪ್ರದರ್ಶನ

03:11 PM Nov 04, 2017 | Team Udayavani |

ಪಯಣ ತಂಡದವರಿಂದ “ಹುಚ್ಚರಯ್ನಾ ಹುಚ್ಚರು’ ನಾಟಕ ಪ್ರದರ್ಶನ ನಡೆಯುತ್ತಿದೆ. ಇದು ಹಾಸ್ಯಪ್ರಧಾನ ನಾಟಕವಾಗಿದ್ದು, ಜ್ಞಾನಪೀಠ ಪ್ರಶಸ್ತಿಯ ಕನಸು ಕಾಣುತ್ತಿರುವ ಒಬ್ಬ ಕಥೆಗಾರ ಇದರ ಕೇಂದ್ರಬಿಂದು. ಆತನ ಬದುಕಿನಲ್ಲಿ ನಡೆಯುವ ಘಟನೆಗಳು, ಬದುಕು ಪಡೆದುಕೊಳ್ಳುವ ತಿರುವುಗಳು ರಂಗದ ಮೇಲೆ ಸಮರ್ಥವಾಗಿ ಮೂಡಿಬಂದಿವೆ.

Advertisement

ಈ ನಾಟಕ ಹಾಸ್ಯದ ಮೂಲಕವೇ ಸಮಾಜಕ್ಕೊಂದು ಸಂದೇಶ ನೀಡುತ್ತದೆ. ಸಂಗೀತ ಮತ್ತು ಹಾಡುಗಳು ಖುಷಿ ಕೊಡುವಂತಿವೆ. ಈ ನಾಟಕ ಅತ್ಯುತ್ತಮ ಹಾಸ್ಯ ನಾಟಕ ಪ್ರಶಸ್ತಿಯನ್ನೂ ಪಡೆದಿದೆ. ಟಿಕೆಟ್‌ ದರ 100 ರೂ. ಟಿಕೆಟ್‌ ಬುಕ್ಕಿಂಗ್‌ಗೆ 9164253123 ಸಂಪರ್ಕಿಸಿ. 

ಎಲ್ಲಿ?: ಸೇವಾ ಸದನ, ಮಲ್ಲೇಶ್ವರಂ
ಯಾವಾಗ?: ನವೆಂಬರ್‌ 5, ಸಂಜೆ 4.30 -7

Advertisement

Udayavani is now on Telegram. Click here to join our channel and stay updated with the latest news.

Next