Advertisement

Madikeri: ವರ್ತಕನ ಮೇಲೆ ಗುಂಡಿನ ದಾಳಿ: ಕೂದಲೆಳೆ ಅಂತರದಲ್ಲಿ ಪಾರು

10:59 PM Apr 22, 2023 | Team Udayavani |

ಮಡಿಕೇರಿ: ವರ್ತಕರೊಬ್ಬರ ಮೇಲೆ ಗುಂಡಿನ ದಾಳಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ವೀರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಡೆದಿದೆ.

Advertisement

ವರ್ತಕ ಕೆ. ಬೋಪಣ್ಣ ಪಾರಾದ ವರು. ಆರೋಪಿ ಎನ್‌. ರಂಜನ್‌ ಚಿಣ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಂಜನ್‌ ಚಿಣ್ಣಪ್ಪ ಅವರ ಅಂಗಡಿಯಲ್ಲಿ 8 ವರ್ಷಗಳಿಂದ ಬೋಪಣ್ಣ ಅಡಿಕೆ ಖರೀದಿ ವ್ಯವಹಾರ ನಡೆಸುತ್ತಿದ್ದರು. ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಲಹ ಏರ್ಪಟ್ಟು ರಂಜನ್‌ ಚಿಣ್ಣಪ್ಪ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಮತ್ತು ಸ್ಥಳದಲ್ಲೇ ಬಿದ್ದಿದ್ದ ರಿವಾಲ್ವರ್‌ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next