Advertisement

Madikeri: ಅತ್ಯಾಚಾರಿಗೆ ಕಠಿಣ ಸಜೆ

08:47 PM May 07, 2024 | Team Udayavani |

ಮಡಿಕೇರಿ: ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದಂಡ ಸಹಿತ ಕಠಿಣ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

Advertisement

ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮದ ಪುಟ್ಟರಾಜು (32) ಶಿಕ್ಷೆಗೆ ಒಳಗಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ಠಾಣೆಯ ಪೊಲೀಸರು 2021ರ ಮಾ. 30ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ತನಿಖಾಧಿಕಾರಿಯಾದ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಎಂ.ಎನ್‌.ರಾಮರೆಡ್ಡಿ, ವೃತ್ತ ನಿರೀಕ್ಷಕ ಎಸ್‌.ಎನ್‌. ಜಯರಾಮ್‌ ಹಾಗೂ ಸಹಾಯಕ ತನಿಖಾಧಿಕಾರಿ ಅಬ್ದುಲ್‌ ಮಜೀದ್‌ ಕೆ.ಎ. ಅವರು ಪುಟ್ಟರಾಜು ವಿರುದ್ಧ ದೋಷಾರೋಪಣ ಪತ್ರವನ್ನು 2021ರ ಅ. 28ರಂದು ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇ 6ರಂದು ತೀರ್ಪಿನಲ್ಲಿ ಪುಟ್ಟರಾಜುಗೆ ಒಟ್ಟು 11 ವರ್ಷ ಜೈಲು ಶಿಕ್ಷೆ ಹಾಗೂ 12 ಸಾವಿರ ರೂ.ಗಳ ದಂಡವನ್ನು ವಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next