Advertisement

ಮಡಿಕೇರಿ: 9 ವರ್ಷಗಳ ಬಳಿಕ ಕುಟುಂಬ ಸೇರಿದ ಹರಿಯಾಣದ ಮಹಿಳೆ

01:02 AM Jan 04, 2023 | Team Udayavani |

ಮಡಿಕೇರಿ: ಮಾನಸಿಕ ಸಮಸ್ಯೆಯಿಂದಾಗಿ 9 ವರ್ಷಗಳ ಹಿಂದೆ ಕುಟುಂಬದವರಿಂದ ದೂರವಾಗಿ ನಗರದ ತ್ಯಾಗರಾಜ ಕಾಲನಿಯಲ್ಲಿರುವ “ತಣಲ್‌’ ಆಶ್ರಮದ ಪ್ರಯತ್ನದಿಂದ ಹರಿಯಾಣ ಮೂಲದ ಮಹಿಳೆಯೊಬ್ಬರು ಪತಿಯ ಜತೆಗೆ ತೆರಳಿದ್ದಾರೆ.

Advertisement

ಹರಿಯಾಣದ ದರ್ಶನ 4 ವರ್ಷಗಳಿಂದ “ತಣಲ್‌’ ಆಶ್ರಮದಲ್ಲಿ ಆಶ್ರಯ ಪಡೆದು ಮಾನಸಿಕವಾಗಿ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಅವರಿಗೆ 32 ವರ್ಷಗಳ ಹಿಂದೆ ದಿಲ್ಲಿಯ ಲೆಹರ್‌ ಸಿಂಗ್‌ ಜತೆಗೆ ವಿವಾಹವಾಗಿತ್ತು. ಸಮಸ್ಯೆಗಳ ನಡುವೆ ದಿಲ್ಲಿಯಲ್ಲಿ ಐವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. 9 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಅವರನ್ನು ಕುಟುಂಬದವರು ಎಷ್ಟೇ ಹುಡುಕಾಡಿದರು ಪತ್ತೆಯಾಗಿರಲಿಲ್ಲ.

2018ರ ಜುಲೈಯಲ್ಲಿ ಕುಶಾಲನಗರದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಕಂಡ ಪೊಲೀಸರು ತಣಲ್‌ ಅಶ್ರಮವನ್ನು ಸಂಪರ್ಕಿಸಿ ಆಶ್ರಯ ನೀಡುವಂತೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next