ಮೈಸೂರು ಜ್ಯೋತಿನಗರದ ಪಳನಿಸ್ವಾಮಿ ಅವರ ಪುತ್ರ ರಮೇಶ್ (28) ಎಂದು ಗುರುತಿಸಲಾಗಿದೆ. ರಮೇಶ್ ತನ್ನ ಸಂಬಂಧಿ ಕಿರಣ್ ಅವರೊಂದಿಗೆ ಮಡಿಕೇರಿಗೆ ತೆರಳಿ ಬಳಿಕ ಕುಶಾಲನಗರಕ್ಕೆ ವಾಪಸ್ ಬಂದಿದ್ದಾರೆ. ಕುಶಾಲನಗರ ಸಮೀಪ ಕಾವೇರಿ ನದಿ ತೀರದಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಗಾಬರಿಗೊಂಡಂತೆ ವರ್ತಿಸಿದ ಅವರು ನದಿಗೆ ಜಿಗಿದಿದ್ದಾರೆ.
Advertisement
ತತ್ಕ್ಷಣ ಆತನನ್ನು ರಕ್ಷಿಸಲು ಕಿರಣ್ ಕೂಡ ನದಿಗೆ ಹಾರಿದ್ದು, ಆದರೆ ರಕ್ಷಿಸಲು ಸಾಧ್ಯವಾಗಲಿಲ್ಲ. ಕಿರಣ್ ಪ್ರಯಾಸದಿಂದ ದಡ ಸೇರಿದರಾದರೂ, ರಮೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಕಿರಣ್ ಕುಶಾಲನಗರದ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೀರಿನ ಹರಿವಿನ ಹೆಚ್ಚಳದ ಕಾರಣ ಅಗ್ನಿಶಾಮಕ ದಳ, ಪೊಲೀಸ್, ರ್ಯಾಫ್ಟಿಂಗ್ ಯುವಕರ ಸಹಾಯ ಮತ್ತು ಈಜುಗಾರಿಕೆಯಲ್ಲಿ ಪ್ರಾವೀಣ್ಯ ಪಡೆದ ಯುವಕರನ್ನು ಸೇರಿಸಿಕೊಂಡು ಹುಡುಕಾಟ ಪ್ರಾರಂಭಿಸಿದರು.