Advertisement

ಲಕ್ಷಾಂತರ ಕುಟುಂಬ ಕುಡಿತದಿಂದ ಮುಕ್ತ  

03:37 PM Jan 02, 2023 | Team Udayavani |

ಮಧುಗಿರಿ: ರಾಜಕೀಯ ಏನೇ ಇರಲಿ ಧರ್ಮ ಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರ ಮದ್ಯವರ್ಜನ ಶಿಬಿರ ಸೇರಿದಂತೆ ಹಲವು ಕಾರ್ಯ ಕ್ರಮ ದೇವರ ಕಾರ್ಯಕ್ರಮ. ಈಗಾಗಲೇ ಲಕ್ಷಾಂ ತರ ಕುಟುಂಬಗಳನ್ನು ಕುಡಿತದಿಂದ ಮುಕ್ತವಾಗಿಸಿ ದ್ದಾರೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.

Advertisement

ಪಟ್ಟಣದ ಎಂ.ಎಸ್‌.ರಾಮಯ್ಯ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಇತರರ ಸಹಕಾರದಲ್ಲಿ ನಡೆದ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮಗೆ ಶಿಬಿರದ ಮೊದಲು ಇದ್ದ ಮನಸ್ಥಿತಿ ಬದಲಾಗಿದ್ದು, ಹೊಸ ಬದುಕು ಸಿಕ್ಕಿದೆ. ನಿಮ್ಮ ಈ ಬದಲಾವಣೆಗೆ ಹಲವರು ಕಾರಣರಾಗಿದ್ದು, ನೀವೂ ಕೂಡ ಮದ್ಯಮುಕ್ತ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಮನವಿ ಮಾಡಿದರು.

ಗೌರವ ತನ್ನಿ: ಸಾನ್ನಿಧ್ಯ ವಹಿಸಿದ್ದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ಮಾತನಾಡಿ, ಈ ಮದ್ಯವು ರಾಮಾಯಣ-ಮಹಾಭಾರತ ದಿಂದಲೂ ಉಳಿದಿದೆ. ಇದರಿಂದ ವ್ಯಕ್ತಿಯ ಬದುಕು ಹಾಳಾಗಲಿದ್ದು, ಇದನ್ನು ತ್ಯಜಿಸುವ ಆತ್ಮ ನಿಮ್ಮದಾಗಲಿ. ನಿಮ್ಮ ಮನಃಪರಿವರ್ತನೆ ಮಾಡಿದ ಕುಮಾರ್‌ ನಮ್ಮಂತ ನೂರು ಸ್ವಾಮೀಜಿಗಳಿಗೆ ಸಮ. ಅವರ ಶ್ರಮಕ್ಕೆ ನೀವೆಲ್ಲ ಗೌರವ ತರುವಂತೆ ಬಾಳಬೇಕು ಎಂದರು.

ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನ ಕುಂಟೆ ಹನುಮಂತೇಗೌಡ ಮಾತನಾಡಿ, ಧರ್ಮ ಸ್ಥಳ ಸಂಘದ ಪ್ರತಿ ಕೆಲಸದಲ್ಲಿ ಭಗವಂತನಿದ್ದು, ಸರ್ಕಾರದಂತೆ ಕೆಲಸ ಮಾಡುತ್ತಿದೆ. ಲಕ್ಷಾಂತರ ಕುಟುಂಬಕ್ಕೆ ನೆರವಾದ ಇಂತಹ ಶಿಬಿರಗಳು ಯಶಸ್ವಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್‌ ಮಾತನಾಡಿ, ಇಂದಿನಿಂದ ನಿಮಗೆಲ್ಲ ಹೊಸ ಬದುಕು ಸಿಕ್ಕಿದ್ದು, ಮತ್ತೆ ತಪ್ಪಾಗದಂತೆ ನಡೆದುಕೊಳ್ಳಿ. 100 ದಿನಗಳ ನಂತರ ಕ್ಷೇತ್ರಕ್ಕೆ ಬಂದು ಪೂಜ್ಯರ ಹಾಗೂ ಶ್ರೀ ಮಂಜುನಾಥನ ದರ್ಶನ ಮಾಡಬೇಕು. ನಿಮ್ಮ ಬದುಕಿಗೆ ನೆರವಾಗಲು ಪೂಜ್ಯರು ಈ ಶಿಬಿರವನ್ನು ಕಲ್ಪಿಸಿಕೊಟ್ಟಿದ್ದು. ಅವರಿಗೆ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಗೌರವ ತರುವಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗೇಶ್‌ ಬಾಬು, ಶಿಬಿರದ ತರಬೇತುದಾರ ಕುಮಾರ್‌, ಗಣೇಶ್‌ ಆಚಾರ್ಯ ಮಾತನಾಡಿದರು. ಮುಖಂಡರಾದ ತುಂಗೋಟಿ ರಾಮಣ್ಣ, ಎಂ.ಜಿ.ಶ್ರೀನಿವಾಸಮೂರ್ತಿ, ಜನಜಾಗೃತಿ ವೇದಿಕೆ ಸದಸ್ಯರಾದ ಮಂಜುನಾಥ್‌, ಸಂಜೀವಗೌಡ, ಕಸಾಪ ಅಧ್ಯಕ್ಷೆ ಸಹನಾ, ತಾಲೂಕು ಯೋಜನಾಧಿಕಾರಿ ದಿನೇಶ್‌ ಕುಮಾರ್‌, ಮ್ಯಾನೇಜರ್‌ ಗಂಗಾಧರ್‌, ಕೃಷಿ ಮೇಲ್ವಿಚಾರಕ ಭಾನುಪ್ರಕಾಶ್‌, ವಲಯ ಮೇಲ್ವಿಚಾರಕಿ ಅನಿತಾ, ಸೇವಾ ಪ್ರತಿನಿಧಿಗಳು ಹಾಗೂ ವ್ಯಸನ ಮುಕ್ತರ ಕುಟುಂಬದವರು ಭಾಗವಹಿಸಿದ್ದರು.

ಒಂದೇ ಕುಟುಂಬದ 11 ಮಂದಿ ಭಾಗಿ : ಶಿಬಿರದಲ್ಲಿ 74 ಮಂದಿ ಮದ್ಯಮುಕ್ತರಾಗಿದ್ದು, 1 ಸರ್ಕಾರಿ ನೌಕರರು ಇದ್ದರು. 21ನೇ ವಯಸ್ಸಿನಿಂದ 63 ವರ್ಷದ ವ್ಯಕ್ತಿಗಳು, ಒಂದೇ ಕುಟುಂಬದ 11 ಮಂದಿ ಭಾಗವಹಿಸಿದ್ದು ಮದ್ಯ ವ್ಯಸನ ತ್ಯಜಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವ್ಯಸನಿಗಳ ಪರವಾಗಿ ಮಾತನಾಡಿದ ಹನುಮಂತರಾಜ್‌, ಹಿಂದಿನ ಜನ್ಮ ಕಳೆದು ಈಗ ಮರುಜನ್ಮ ಪಡೆದಿದ್ದೇವೆ. ಇದಕ್ಕಾಗಿ ಪೂಜ್ಯರಿಗೆ ವಂದನೆಗಳು ಎಂದರು.

ಮೊದಲ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ, ಲಾಟರಿ, ಜೂಜು ನಿಷೇಧ ಮಾಡಿದ್ದರು. ಎರಡನೇ ಬಾರಿ ಸಿಎಂ ಆದಾಗ ಆ ದಂಧೆಯ ಜನರೆಲ್ಲ ಸೇರಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದರು. ಎಂ.ವಿ.ವೀರಭದ್ರಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next