Advertisement

ರಸ್ತೆಯಲ್ಲೇ ಕುರ್ತಾ ತೆಗೆದ ಬಿಜೆಪಿ ಸಚಿವ : ವಿಡಿಯೋ ವೈರಲ್‌

10:09 PM Feb 10, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರ ಆಯೋಜಿಸಿರುವ ವಿಕಾಸ ರಥಯಾತ್ರೆ ವೇಳೆ ಸಚಿವ ಬೃಜೇಂದ್ರ ಪ್ರಸಾದ್‌ ಯಾದವ್‌ ಮೇಲೆ ತುರಿಕೆ ಪುಡಿ ಎರಚಿದ್ದಾರೆ.

Advertisement

ಮುಂಗ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.ವಿಪರೀತ ತುರಿಕೆಯ ಉಂಟಾಗಿದ್ದರಿಂದ ಅವರು ತಮ್ಮ ಕುರ್ತಾ ತೆಗೆದು ಕೈತೊಳೆದುಕೊಂಡಿದ್ದಾರೆ. ಅದರ ವಿಡಿಯೋ ಈಗ ವೈರಲ್‌ ಆಗಿದೆ.

ಎರಡು ದಿನಗಳ ಹಿಂದೆ ಖಾಂಡ್ವ ಜಿಲ್ಲೆಯ ಹಳ್ಳಿಯೊಂದರಲ್ಲಿ ಯಾತ್ರೆ ಸಾಗುತ್ತಿದ್ದಾಗ ಸ್ಥಳೀಯರಿಗೆ ಮತ್ತು ಬಿಜೆಪಿ ಶಾಸಕ ದೇವೇಂದ್ರ ವರ್ಮ ನಡುವೆ ರಸ್ತೆ ನಿರ್ಮಾಣ ವಿಚಾರದಲ್ಲಿ ಮಾತಿನ ಚಕಮಕಿ ಉಂಟಾಗಿದ್ದರಿಂದ ಯಾತ್ರೆ ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next