Advertisement

ಅರೆಬರೆ ನಿರ್ಮಾಣವಾದ ಮನೆ, ಜೊತೆಗೆ 14,000 ರೂ. ಬಿಲ್‌!

07:11 PM Dec 26, 2021 | Team Udayavani |

ಭೋಪಾಲ್‌: ಮುಂದಿನ ಸಾಲುಗಳನ್ನು ಓದಿದ ಮೇಲೆ ಹೀಗೆಲ್ಲ ಉಂಟಾ ಎಂದು ನೀವು ಆಶ್ಚರ್ಯಪಡುವುದಿಲ್ಲ. ಕಾರಣ ಭಾರತದಲ್ಲಿ ಇಂತಹ ಸಾವಿರಾರು ಘಟನೆಗಳನ್ನು ನೀವು ಕೇಳಿಯೇ ಇರುತ್ತೀರಿ. ಅಂತಹದ್ದೇ ಒಂದು ವಿಪರ್ಯಾಸಪೂರಿತ ಘಟನೆ ಮಧ್ಯಪ್ರದೇಶ ಜಿಲ್ಲೆಯ ವಿದಿಶಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

Advertisement

ಬುಧ್ರಾಮ್‌ ಆದಿವಾಸಿ ಎಂಬಾತನಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಅರೆಬರೆ ನಿರ್ಮಾಣವಾಗಿದ್ದ ಮನೆಯೊಂದನ್ನು ಆಗಸ್ಟ್‌ನಲ್ಲಿ ನೀಡಲಾಗಿದೆ. ಆಗ ಸ್ವತಃ ರಾಜ್ಯಪಾಲ ಮಾಂಗುಭಾಯಿ ಪಟೇಲ್‌ ಬುಧ್ರಾಮ್‌ ಮನೆಗೆ ತೆರಳಿ, ಊಟ ಮಾಡಿ ಕೀ ಹಸ್ತಾಂತರಿಸಿದ್ದರು. ಅದಾದ ನಂತರ 14,000 ರೂ. ಬಿಲ್ಲನ್ನು ಬುಧ್ರಾಮ್ ಗೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ನೀಡಿ “ಈ ಬಿಲ್‌ ಕಟ್ಟಿ’ ಎಂದು ಸೂಚಿಸಿದ್ದಾರೆ!

ರಾಜ್ಯಪಾಲರು ಬಂದಿದ್ದಾಗ ಆ ಮನೆಯ ಮುಂದೆ ಅಧಿಕಾರಿಗಳೇ ಒಂದು ಗೇಟನ್ನು ನಿರ್ಮಿಸಿದ್ದರು. ಆ ಗೇಟು ನಿರ್ಮಾಣಕ್ಕೆ ತಗುಲಿದ ವೆಚ್ಚ ಎಂದು ಈಗ ಇಷ್ಟು ಹಣ ಕಟ್ಟುವಂತೆ ಅಧಿಕಾರಿಗಳು ಒತ್ತಡ ಹೇರ ತೊಡಗಿದ್ದಾರೆ. ಆ ವಿಚಾರ ಬುಧ್ರಾಮ್‌ಗೆ ದುಃಖ ತರಿಸಿದೆ. ತನ್ನಲ್ಲಿ ಹಣವಿಲ್ಲ ಕಟ್ಟುವುದು ಹೇಗೆ ಎಂದು ಕೇಳುತ್ತಿದ್ದಾರೆ. ಇದೀಗ ಆರು ತಿಂಗಳು ಕಳೆದಿದೆ. ಆ ಮನೆ ಕೂಡ ಪೂರ್ಣ ನಿರ್ಮಾಣವಾಗಿಲ್ಲ. ಅಲ್ಲದೇ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಂಪರ್ಕ ನೀಡುತ್ತೇವೆಂದು ಹೇಳಲಾಗಿತ್ತು. ಅದೂ ಆಗಿಲ್ಲ. ಈ ವಿಚಾರ ಈಗ ಮಧ್ಯಪ್ರದೇಶ ಸರ್ಕಾರದ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next