Advertisement

ಪ್ರೀತಿಸದ ಹತಾಶೆ: 17ರ ಬಾಲಕಿಯ ತಲೆ ಕಡಿದು ಕೊಂದ ಯುವಕ

04:00 PM Feb 23, 2018 | Team Udayavani |

ಭೋಪಾಲ್‌ : ತನ್ನನ್ನು ಪ್ರೀತಿಸದ ಕಾರಣಕ್ಕೆ ಹತಾಶಗೊಂಡ ತರುಣನೋರ್ವ 17ರ ಹರೆಯದ ಬಾಲಕಿಯನ್ನು ಆಕೆಯ ಶಾಲೆಯ ಗೇಟ್‌ ಸಮೀಪವೇ ತಲವಾರಿನಿಂದ ತಲೆ ಕಡಿದು ಕೊಂದ ಅತ್ಯಮಾನುಷ ಘಟನೆ ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಭೋಪಾಲ್‌ ದಿಂದ ಸುಮಾರು 550 ಕಿ.ಮೀ. ದೂರವಿರುವ ಕೋತ್ಮಾ ಎಂಬ ಪಟ್ಟಣದಿಲ್ಲ ನಿನ್ನೆ ಗುರುವಾರ ಮಧ್ಯಾಹ್ನ  ದಿಲೀಪ್‌ ಸಾಹು ಎಂಬ ತರುಣ ತಲವಾರಿನಿಂದ ಪೂಜಾ ಪಾಣಿಕಾ ಎಂಬ 11ನೇ ತರಗತಿಯ ಹುಡುಗಿಯ ತಲೆ ಕಡಿದು ಕೊಂದ ಘಟನೆ ನಡೆಯಿತು. ನಿಗಾವಾನಿ ರಸ್ತೆಯಲ್ಲಿನ ತನ್ನ ಶಾಲೆಯಲ್ಲಿ ಬಯಾಲಜಿ ಪರೀಕ್ಷೆ ಬರೆಯಲು ಆಕೆ ಹೋಗುತ್ತಿದ್ದಾಗ ದಿಲೀಪ್‌ ಸಾಹುವಿನಿಂದ ಈ ಅಮಾನುಷ ಕೃತ್ಯ ನಡೆಯಿತು. 

ದಿಲೀಪ್‌ ಸಾಹು, ಪೂಜಾ ಳ ತಲೆ, ಬೆನ್ನು, ಕುತ್ತಿಗೆಯನ್ನು ಹರಿತವಾದ ತಲವಾರಿನಿಂದ ಕಡಿದ. ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸತ್ತಳು. 

ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಯೋರ್ವ, “ಹುಡುಗಿಯನ್ನು ಹಿಂಬಾಲಿಸುತ್ತಾ ಹೋದ ವ್ಯಕ್ತಿ ಆಕೆಯ ಮನೆಯವನೆಂದೇ ನಾನು ಭಾವಿಸಿದೆ; ನೋಡ ನೋಡುತ್ತಿದ್ದಂತೆಯೆ ಆತ ಆಕೆಯ ಮೇಲೆ ತಲವಾರಿನಿಂದ ದಾಳಿ ಮಾಡತೊಡಗಿದ್ದ. ನಾನು 20 ಅಡಿ ದೂರದಲ್ಲಿದೆ. ನಿಲ್ಲು, ನಿಲ್ಲು ಎಂದು ಬೊಬ್ಬಿಟ್ಟು ಆತನನ್ನು ತಡೆಯಲು ಯತ್ನಿಸಿದೆ; ಆದರೆ ಆ ಹೊತ್ತಿಗೆ ಅವನು ಹುಡುಗಿಯನ್ನು ನೆಲಕ್ಕುರುಳಿಸಿ ಪರಾರಿಯಾದ’ ಎಂದು ಹೇಳಿದರು. 

2014ರಿಂದಲೇ ದಿಲೀಪ್‌ ಸಾಹು, ಪೂಜಾಳ ಹಿಂದೆ ಬಿದ್ದಿದ್ದ; ಆಕೆ  ಶಾಲೆಗೆ ಹೋಗುವಾಗ, ಬರುವಾಗ ಚುಡಾಯಿಸುತ್ತಿದ್ದ. ಆಗಲೇ ಆತನ ವಿರುದ್ಧ ಕೇಸು ದಾಖಲಾಗಿತ್ತು ಎಂದು ತಿಳಿಸಿರುವ ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ವಿಜಯ್‌ ಸಿಂಗ್‌, ನಿನ್ನೆ ಗುರುವಾರ ಪೂಜಾಳ ಕೊಲೆ ನಡೆದ ತತ್‌ಕ್ಷಣವೇ ಆರೋಪಿ ದಿಲೀಪ್‌ ನನ್ನು ಬಂಧಿಸಲಾಗಿದೆ; ಆತನನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next