Advertisement

ಸಂತ್ರಸ್ತೆಗೆ ರಾಖಿ ಕಟ್ಟಿ ಕಾಣಿಕೆ ಕೊಡಲು ಲೈಂಗಿಕ ದೌರ್ಜನ್ಯ ಆರೋಪಿಗೆ ಕೋರ್ಟ್ ಆದೇಶ

03:16 AM Aug 04, 2020 | Hari Prasad |

ಭೋಪಾಲ್‌:  ‘ನಿನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಯತ್ನ ಅಪಾದನೆ ಮಾಡಿರುವ ಮಹಿಳೆಯ ಮನೆಗೆ ತೆರಳಿ ರಾಖಿ ಕಟ್ಟಿ, ಜೀವನಪೂರ್ತಿ ಆಕೆಯನ್ನು ಸಹೋದರನಂತೆ ನೋಡಿಕೊಳ್ಳುವುದಾಗಿ ಅಭಯ ನೀಡಬೇಕು’ ಎಂದು ನ್ಯಾಯಾಲಯ ತಾಕೀತು ಮಾಡಿದೆ.

Advertisement

ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠವು, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆಪಾದನೆ ಮೇರೆಗೆ ಜೈಲು ಸೇರಿರುವ ಆರೋಪಿಗೆ ಈ ರೀತಿ ಷರತ್ತುಬದ್ಧ ಜಾಮೀನು ನೀಡಿದೆ.

‘ನೀನು ಆ.3ರಂದು ನಿನ್ನ ಪತ್ನಿಯ ಜತೆಗೆ ಸಿಹಿ ತಿನಿಸು ಬಾಕ್ಸ್‌ನೊಂದಿಗೆ ಆ ‘ಸಂತ್ರಸ್ತೆ’ ಮನೆಗೆ ಹೋಗಿ ರಾಖಿ ಕಟ್ಟಬೇಕು. ಅಲ್ಲದೇ ಆಕೆಗೆ 11 ಸಾವಿರ ರೂ. ರಾಖಿ ಕಾಣಿಕೆ ನೀಡಿ ಆಶೀರ್ವಾದ ಪಡೆಯಬೇಕು. ಜತೆಗೆ ಮಹಿಳೆಯ ಪುತ್ರನಿಗೆ ಬಟ್ಟೆ, ಸಿಹಿತಿಂಡಿ ಖರೀದಿಸಲು 5 ಸಾವಿರ ರೂ. ನೀಡಬೇಕು ಎಂದು ಸೂಚನೆ ನೀಡಿದೆ.

ಕಳೆದ ಎಪ್ರಿಲ್‌ನಲ್ಲಿ ಉಜ್ಜೈನಿಯಲ್ಲಿ ವಿಕ್ರಂ ಬಾಗ್ರಿ ಎಂಬಾತ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದ್ದನು. ಘಟನೆ ಸಂಬಂಧ ಈತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next