Advertisement

Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ

01:17 AM May 20, 2024 | Team Udayavani |

ಮಧ್ಯಪ್ರದೇಶ: ಮಗ ಮಾಡಿದ ತಪ್ಪಿಗೆ ವೃದ್ಧ ದಲಿತ ತಂದೆ, ತಾಯಿ ಯನ್ನು ಕಂಬಕ್ಕೆ ಕಟ್ಟಿ, ಥಳಿಸಿ, ಬೂಟಿನ ಹಾರ ಹಾಕಿ ದೌರ್ಜನ್ಯವೆಸಗಿದ ಘಟನೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಕಿಲೊರಾ ಗ್ರಾಮದಲ್ಲಿ ನಡೆದಿದೆ.

Advertisement

ಈ ಸಂಬಂಧ 10 ಜನರ ವಿರುದ್ಧ ಪ್ರಕರಣ ದಾಖಲಾ ಗಿದೆ. ವೃದ್ಧ ದಂಪತಿಯ ಮಗ ಆರೋಪಿಯೊಬ್ಬರ ಪತ್ನಿಯನ್ನು ಪೀಡಿಸಿದ್ದ ಕಾರಣ ದಂಪತಿ ಗ್ರಾಮ ತೊರೆ ದಿದ್ದರು. ಕಳೆದ ಶುಕ್ರವಾರ ಗ್ರಾಮಕ್ಕೆ ಮರಳಿದಾಗ 10 ಜನರ ಗುಂಪು ಅವರನ್ನು ಕಂಬಕ್ಕೆ ಕಟ್ಟಿ, ಥಳಿಸಿ ಅವಮಾನಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next