Advertisement

Madhya Pradesh; ಬಿಜೆಪಿಯಿಂದಲೂ 500 ರೂ.ಗೆ ಸಿಲಿಂಡರ್‌ ಘೋಷಣೆ ಖಚಿತ: ಕಮಲ್‌ನಾಥ್‌

08:03 PM Aug 21, 2023 | Shreeram Nayak |

ಭೋಪಾಲ:ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ. ಹೀಗೆಂದು ಮಾಜಿ ಸಿಎಂ ಕಮಲ್‌ನಾಥ್‌ ಭವಿಷ್ಯ ನುಡಿದಿದ್ದಾರೆ.

Advertisement

ಖಾಸಗಿ ಚಾನೆಲ್‌ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ನಾವು ಚುನಾವಣೆ ವೇಳೆ ನೀಡಿದ ವಾಗ್ಧಾನ ಪೂರೈಸಿದ್ದೇವೆ. ಅದರಂತೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ಪ್ರತಿ ತಿಂಗಳಿಗೆ 1,500 ರೂ., 100 ಯುನಿಟ್‌ ಉಚಿತ ವಿದ್ಯುತ್‌ ನೀಡಲಿದ್ದೇವೆ. ಈ ಘೋಷಣೆ ಬಳಿಕ ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ 500 ರೂ.ಗೆ ಸಿಲಿಂಡರ್‌ ನೀಡುವ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ’ ಎಂದು ಹೇಳಿದ್ದಾರೆ.

2024ರ ಚುನಾವಣೆಗಾಗಿ ಪ್ರತಿಪಕ್ಷಗಳ ಒಕ್ಕೂಟ, ಐ.ಎನ್‌.ಡಿ.ಐ.ಎ.ನಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಪರಿಹರಿಸಲಾಗುತ್ತದೆ ಎಂದರು.

ಖರ್ಗೆ ಪ್ರಚಾರ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಂದೇಲ್‌ಖಂಡ್‌ ಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ಮಂಗಳವಾರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next