Advertisement

ಕೋವಿಡ್ 19 ವಿರುದ್ಧ ಹೋರಾಟ; 50 ಲಕ್ಷ ರೂಪಾಯಿ ಜೀವ ವಿಮೆ ಘೋಷಿಸಿದ ಮಧ್ಯಪ್ರದೇಶ

10:33 AM Apr 08, 2020 | Nagendra Trasi |

ಭೋಪಾಲ್: ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿಗಳ ಶುಶ್ರೂಷೆ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ 50 ಲಕ್ಷ ರೂಪಾಯಿ ಜೀವ ವಿಮೆ ಮಾಡಿಸುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಘೋಷಿಸಿದ್ದಾರೆ.

Advertisement

ಮಧ್ಯಪ್ರದೇಶ ಮುಖ್ಯಮಂತ್ರಿ ಕಚೇರಿಯು ಮಂಗಳವಾರ ಈ ಕುರಿತು ಟ್ವೀಟ್ ಮಾಡಿದ್ದು, ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ವಿಮೆ ಮಾಡಿಸಲಿದೆ ಎಂದು ತಿಳಿಸಿದೆ.

ಈ ಇನ್ಸೂರೆನ್ಸ್ ನಲ್ಲಿ ಹೆಲ್ತ್ ಕೇರ್ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರದ 50 ರೂಪಾಯಿ ಸೇರಿರುವುದಾಗಿ ಟ್ವೀಟ್ ನಲ್ಲಿ ವಿವರಿಸಿದೆ. ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಹೆಲ್ತ್ ಕೇರ್ ಸಿಬ್ಬಂದಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಒಟ್ಟು 50 ಲಕ್ಷ ರೂಪಾಯಿ ಇನ್ಸೂರೆನ್ಸ್ ಘೋಷಿಸಿದ್ದರು.

ಇದರಲ್ಲಿ ವೈದ್ಯರು, ನರ್ಸ್ ಗಳು, ಪ್ಯಾರಮೆಡಿಕ್ಸ್, ಇತರೆ ಸಿಬ್ಬಂದಿಗಳಿಗೆ ವಿಮೆ ಲಭ್ಯವಾಗಲಿದೆ ಎಂದು ಸಚಿವೆ ತಿಳಿಸಿದ್ದರು. ಈ ಇನ್ಸೂರೆನ್ಸ್ ಮೂರು ತಿಂಗಳ ಕಾಲಾವಧಿಯದ್ದಾಗಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next