Advertisement

ಮಧ್ವ ಸರೋವರ: ಹೂಳೆತ್ತುವಿಕೆ ಆರಂಭ

02:36 AM Apr 25, 2019 | Sriram |

ಉಡುಪಿ: ಶ್ರೀಕೃಷ್ಣ ಮಠದ ಮಧ್ವ ಸರೋವರದ ಹೂಳೆತ್ತುವಿಕೆ ಕೆಲಸ ಬುಧವಾರ ಆರಂಭವಾಗಿದೆ. ಮೊದಲು ನೀರನ್ನು ರಾಜಾಂಗಣದಲ್ಲಿರುವ ಬಾವಿಗೆ ಪಂಪಿಂಗ್‌ ಮಾಡಲಾಗುತ್ತಿದೆ. ಈ ನೀರನ್ನು ಕೈತೊಳೆಯುವುದೇ ಮೊದಲಾದ ಕೆಲಸಕ್ಕೆ ಬಳಸಲಾಗುವುದು. ಮಧ್ವ ಸರೋವರದ ಒಳಗೆ ಒಂದು ಸಣ್ಣ ಸರೋವರವಿದ್ದು, ಇದರ ನೀರನ್ನು ಸದ್ಯ ಅಗತ್ಯದ ಸ್ನಾನಾದಿ ಕೆಲಸಕ್ಕೆ ಬಳಸಲಾಗುವುದು. ಉಳಿದೆಡೆ ನೀರು ಖಾಲಿ ಮಾಡಿದ ಬಳಿಕ ಹೂಳೆತ್ತುವಿಕೆ ಆರಂಭಿಸಲಾಗುವುದು. ಮೂರು ಯಂತ್ರಗಳು ಈಗಾಗಲೇ ಬಂದಿದ್ದು, ನೀರೆತ್ತಲಾಗುತ್ತಿದೆ. ಬುಧವಾರ ರಾತ್ರಿ ಅಥವಾ ಗುರುವಾರ, ಶುಕ್ರವಾರ ಈ ಕೆಲಸ ನಡೆಸಲಾಗುವುದು ಎಂದು ಕೃಷ್ಣಮಠದ ಮೂಲಗಳು ತಿಳಿಸಿವೆ.

Advertisement

16 ವರ್ಷಗಳ ಹಿಂದೆ (2002-03) ಪಲಿಮಾರು ಸ್ವಾಮೀಜಿಯವರು ಪರ್ಯಾಯ ಅವಧಿಯಲ್ಲಿ ಮಧ್ವಸರೋವರದ ಹೂಳೆತ್ತುವ ಕೆಲಸವನ್ನು ನಡೆಸಿದ್ದರು. ಆಗ ಮಾನವ ಶ್ರಮದಿಂದ ಮತ್ತು ಶ್ರಮದಾನದಿಂದ ನಡೆಸಿದ್ದರೆ, ಈ ಬಾರಿ ಯಂತ್ರಗಳಿಂದ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next