Advertisement
ಮಧುಕರ್ ಶೆಟ್ಟಿ ಗೆಳೆಯರ ಬಳಗದಿಂದ ಭಾನುವಾರ ಬಸವನಗುಡಿ ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ದಿ. ಮಧುಕರ್ ಶೆಟ್ಟಿಯವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧುಕರ್ ಶೆಟ್ಟಿ ಬಸವನಗುಡಿ ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಹಾಗಾಗಿ ಅವರ ಸಹಪಾಠಿಗಳು ಹಾಗೂ ಸ್ನೇಹಿತರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Related Articles
Advertisement
ಕಾರ್ಯಕ್ರಮದಲ್ಲಿ ಮಧುಕರ್ ಶೆಟ್ಟಿಯವರ ಗುರುಗಳಾದ ಪ್ರೊ.ಶಶಿಧರ್, ಡಾ. ಪದ್ಮಿನಿರಾವ್, ಡಾ. ಸುಬ್ಬರಾವ್, ಪ್ರೊ.ಎಚ್.ಕೆ. ಮೌಳೇಶ್, ಪ್ರೊ.ಜಿ.ರಾಮಕೃಷ್ಣ, ಸಹಪಾಠಿಗಳಾದ ನರಹರಿ, ಎಸ್.ಪಿ.ರಮೇಶ್, ಡಾ.ಬಾಬು ಯೋಗೇಶ್, ತಾರಕೇಶ್, ಪ್ರೊ.ರಾಜೇಶ್, ಹಾಸ್ಟೆಲ್ ವಾರ್ಡನ್ ನಾಗರಾಜ್, ಸಂಬಂಧಿ ವಡ್ಡರ್ಸೆ ಮೋಹನ್ರಾಮ್ ಶೆಟ್ಟಿ ಮತ್ತಿತರರು ಹಾಜರಿದ್ದರು.
ಮಧುನನ್ನು ಉಳಿಸಿಕೊಳ್ಳಲು ಸರ್ಕಾರದ ಬಳಿ ಹಣ ಇರಲಿಲ್ಲವಾ?: ಮಧುಕರ್ ಶೆಟ್ಟಿಯವರ ಸಂಬಂಧಿ ಪ್ರವೀಣ್ ಶೆಟ್ಟಿ ಮಾತನಾಡಿ, “ಮಧುಗೆ ನಿಜವಾಗಿ ಏನು ತೊಂದರೆ ಅಥವಾ ಕಾಯಿಲೆ ಇತ್ತು ಅನ್ನುವುದರ ಬಗ್ಗೆ ಸರಿಯಾಗಿ ಪರೀಕ್ಷೆ ಆಗಿಲ್ಲ. ಹೈದಾರಾಬಾದ್ ಆಸ್ಪತ್ರೆಯಲ್ಲಿ ಮಧು ಐಸಿಯುನಲ್ಲಿ ಇದ್ದಾಗ, ನಾವೆಲ್ಲ ಸೋದರ ಸಂಬಂಧಿಗಳು ಹೊರಗಡೆ ಇದ್ದೇವು. ಯಾರೊಬ್ಬರೂ ಒಳಗೆ ಏನು ನಡಿತಿದೆ ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿರಲಿಲ್ಲ.
ಆವರಿಗೆ ಎಚ್1ಎನ್1 ಇತ್ತು. ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ನಾನು ಮಾಧ್ಯಮಗಳಲ್ಲೇ ನೋಡಿದ್ದು. ಆದರೆ, ವೈದ್ಯರಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಒಬ್ಬ ರಾಜಕಾರಣಿಗೆ ಶೀತ ಆದರೆ ಸಿಂಗಾಪುರಕ್ಕೆ ಕಳಿಸುತ್ತಾರೆ. ಇಂತಹ ಒಬ್ಬ ಅಧಿಕಾರಿಗೆ ಅದು ಯಾಕೆ ಅನ್ವಯವಾಗಿಲ್ಲ. ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕೇಳಿದಾಗ ಈ ಆಸ್ಪತ್ರೆ ಜತೆಗೆ ಇಲಾಖೆಯ “ಟೈಅಪ್’ ಇದೆ ಎಂದು ಅಧಿಕಾರಿಗಳು ಹೇಳಿದರು. ಹಾಗಾದರೆ, ಸರ್ಕಾರದ ಬಳಿ ಹಣ ಇರಲಿಲ್ವಾ ಎಂದು ಅಕ್ರೋಶದಿಂದ ಪ್ರಶ್ನಿಸಿದರು.