Advertisement
ಮಧುಕರ ಶೆಟ್ಟಿ ಅವರ ತಂದೆ ಮನೆಯಾದ ವಡ್ಡರ್ಸೆಗ2ೆ ಧಾರ್ಮಿಕ ಹಾಗೂ ವಿಶೇಷ ಸಂದರ್ಭ ಗಳಲ್ಲಿ ಅವರು ಭೇಟಿ ನೀಡುತ್ತಿದ್ದರು. ಊರಿನ ಜತೆ ಅವರಿಗೆ ಭಾವನಾತ್ಮಕವಾದ ಸಂಬಂಧವಿತ್ತು. ಶುಕ್ರವಾರ ಬೆಳಗ್ಗೆ ಅಭಿಮಾನಿಗಳು ಅವರು ಆರೋಗ್ಯವಾಗುವಂತೆ ವಡ್ಡರ್ಸೆಯ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ಅವರೀಗ ಅಗಲಿರುವುದು ಇಲ್ಲಿನ ಜನರಿಗೆ ಆಘಾತ, ನೋವನ್ನು ತಂದಿದೆ.
ದಕ್ಷತೆ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಶೆಟ್ಟಿ ಅವರು ಚಿಕ್ಕ ಮಗಳೂರು, ಚಾಮರಾಜನಗರ ಮತ್ತಿತರ ಕಡೆ ಪೊಲೀಸ್ ಅಧೀಕ್ಷಕರಾಗಿ, ಬೆಂಗಳೂರು ಸಂಚಾರ ಡಿಸಿಪಿಯಾಗಿ ಕಾರ್ಯನಿರ್ವ ಹಿಸಿದ್ದರು. ಲೋಕಾಯುಕ್ತದಲ್ಲಿ ಎಸ್ಪಿಯಾಗಿ, ಅಕ್ರಮ ಗಣಿಗಾರಿಕೆ ಮತ್ತು ಡಿನೋಟಿಫಿಕೇಶನ್ ಪ್ರಕರಣಗಳಲ್ಲಿ ತನಿಖೆ ನಡೆಸಿ ಖಡಕ್ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ಶೆಟ್ಟಿ ಅವರು 1971 ಡಿ.17ರಂದು ಜನಿಸಿದ್ದರು. ದಿಲ್ಲಿಯ ಜೆಎನ್ಯು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದರು. 1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಅವರು ಚಿಕ್ಕಮಗಳೂರು, ಚಾಮರಾಜನಗರ, ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಉನ್ನತ ವಿದ್ಯಾಭ್ಯಾಸ ರಜೆಯ ಮೇಲೆ ಅಮೆರಿಕಾಗೆ ತೆರಳಿ ಡಾಕ್ಟರೇಟ್ ಪದವಿ ಪಡೆದಿದ್ದರು. ವಿದೇಶದಿಂದ ವಾಪಾಸ್ ಬಂದ ಬಳಿಕ ಡಿಐಜಿಯಾಗಿ ಭಡ್ತಿ ಪಡೆದು ಕೆಲವು ಕಾಲ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.