Advertisement

ಮಧುಗಿರಿ: ಬೆಳ್ಳಂ ಬೆಳಗ್ಗೆ ರೈತನ ಮೇಲೆ ಕರಡಿ ದಾಳಿ

12:35 PM Dec 29, 2022 | Team Udayavani |

ಮಧುಗಿರಿ: ರೈತನೊಬ್ಬನ ಮೇಲೆ ಕರಡಿ ದಾಳಿ ನಡೆಸಿ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ತಾಲೂಕಿನ ಮಿಡಿಗೇಶಿ ಹೋಬಳಿ ದಾಸೇನಳ್ಳಿಯಲ್ಲಿ ಡಿ. 29 ರಂದು ನಡೆದಿದೆ.

Advertisement

ಅದೇ ಗ್ರಾಮದ ರೈತ ನಾಗರಾಜಪ್ಪ ಗಾಯಗೊಂಡವರು.

ಇಂದು ಬೆಳಿಗ್ಗೆಯೇ ರೈತ ನಾಗರಾಜಪ್ಪ ಕುರಿ ಮೇಕೆಗಳಿಗೆ ಸೊಪ್ಪು ತರಲು ಜಮೀನಿಗೆ ಹೋಗಿದ್ದಾಗ ಕರಡಿ ದಾಳಿ ನಡೆಸಿ, ಮುಖ ಹಾಗೂ ತೋಳಿನ ಕಡೆ  ಗಾಯಗಳಾಗಿದ್ದು, ಕಿರುಚಿದ ನಂತರ ಕರಡಿ ಓಡಿ ಹೋಗಿದೆ ಎಂದು ಹೇಳಲಾಗಿದೆ.

ಗಾಯಗೊಂಡ ರೈತನನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರವಿ, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next