Advertisement

ಟ್ರಾಕ್ಟರ್ ಪಲ್ಟಿಯಾಗಿ ಚಾಲಕ ಪಾರು : ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ಅವಘಡ

09:01 AM Aug 28, 2022 | Team Udayavani |

ಮಧುಗಿರಿ : ಸೇತುವೆ ದಾಟಲು ದುಸ್ಸಾಹಸ ಮಾಡಿದ ಚಾಲಕನ ನಿರ್ಲಕ್ಷದಿಂದ ಟ್ರಾಕ್ಟರ್ ಇಂಜಿನ್ ಮುಗುಚಿ ಬಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

Advertisement

ತಾಲೂಕಿನ ದೊಡ್ಡೇರಿ ಹೋಬಳಿಯ ಗುಟ್ಟೆ-ಚಂದ್ರಗಿರಿ ರಸ್ತೆಯಲ್ಲಿರುವ ಸೇತುವೆಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ರಭಸವಾಗಿ ಹರಿಯುತ್ತಿತ್ತು. ಬೆಳಿಗ್ಗೆ ಹಾಲಿನ ಕ್ಯಾನ್ ತುಂಬಿಕೊಂಡ ಟ್ರಾಕ್ಟರ್ ಚಾಲಕ ಸೇತುವೆ ದಾಟಲು ಮುಂದಾಗಿದ್ದಾನೆ. ಆದರೆ ನೀರಿನ ಸೆಳೆತಕ್ಕೆ ಟ್ರಾಕ್ಟರ್ ಇಂಜಿನ್ ಪಲ್ಟಿಯಾಗಿ ಸ್ಪಲ್ಪ ಹೊತ್ತು ಚಾಲಕ ಕಾಣೆಯಾಗಿದ್ದನು. ಆತಂಕದಿಂದ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಬಚಾವಾಗಿ ಎದ್ದು ಬಂದಿದ್ದಾನೆ. ಚಾಲಕ‌ನನ್ನು ಗುಟ್ಟೆ ಗ್ರಾಮದ ಶಿವಣ್ಣ ಎಂದು ತಿಳಿದು ಬಂದಿದೆ.

ಟ್ರಾಕ್ಟರ್ ನಲ್ಲಿ ಮತ್ತೆ 4 ಮಹಿಳೆಯರು ಪ್ರಯಾಣಿಸುತ್ತಿದ್ದು ಅವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಸ್ತಳಕ್ಕೆ ತುಮುಲ್ ನಿರ್ದೇಶಕ ಕೊಂಡವಾಡಿ ಚಂದರಶೇಖರ್, ಸಿಪಿಐ ಹನುಂತರಾಯಪ್ಪ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಕಮಿಷನ್ ಪಡೆದಿರುವುದು ಬಿಜೆಪಿಯೋ ಕಾಂಗ್ರೆಸ್ಸೋ ಎಂದು ತನಿಖೆಯಿಂದ ಗೊತ್ತಾಗಲಿದೆ : ಪರಮೇಶ್ವರ್

Advertisement

Udayavani is now on Telegram. Click here to join our channel and stay updated with the latest news.

Next