Advertisement

ನ.28ರಂದು ಶರಾವತಿ ಮುಳುಗಡೆ ರೈತರ ಪಾದಯಾತ್ರೆ: ಮಧು ಬಂಗಾರಪ್ಪ

01:23 PM Nov 26, 2022 | keerthan |

ಶಿವಮೊಗ್ಗ: ಶರಾವತಿ ಮುಳುಗಡೆ ರೈತರ ಪಾದಯಾತ್ರೆಯು ನವೆಂಬರ್‌ 28 ರಂದು ನಡೆಯಲಿದೆ. ಆಯನೂರಿನಿಂದ ಶಿವಮೊಗ್ಗ ನಗರದ ಪಾದಯಾತ್ರೆ ಸಾಗಲಿದೆ. ಬಳಿಕ ಎನ್ಇಎಸ್ ಮೈದಾನದಲ್ಲಿ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದೆ ಎಂದು ಸೊರಬ ಮಾಜಿ ಶಾಸಕ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಹಮ್ಮಿಕೊಂಡ ನಂತರ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬೊಮ್ಮಾಯಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. 15 ದಿನದೊಳಗೆ ಸಮಸ್ಯೆ ಸರಿಪಡಿಸುವುದಾಗಿ ಹೇಳುತ್ತಿದ್ದಾರೆ. ಜಿಲ್ಲೆಯ ಸಂಸದರು ಈ ತನಕ ಸಂಸತ್ತಿನಲ್ಲಿ ರೈತರ ಪರವಾನಗಿ ದನಿ ಎತ್ತಿಲ್ಲ ಎಂದರು.

ಶರಾವತಿ, ಬಗರ್ ಹುಕುಂ, ಕಸ್ತೂರಿರಂಗನ್ ವರದಿ ಸೇರಿದಂತೆ ಅನೇಕ ಕಾರಣಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಹಕ್ಮು ಪತ್ರ ನೀಡಿದರು. ಆದರೆ, ಅದನ್ನು ಈಗಿನ ಸರ್ಕಾರ ವಜಾಗೊಳಿಸಿದೆ. ದಮ್ಮು, ತಾಕತ್ ಬಗ್ಗೆ ಮಾತನಾಡುವ ಸಿಎಂ ಈಗ ಏಕೆ ಮಾತನಾಡುತ್ತಿಲ್ಲ. ಜಾತಿ, ಧರ್ಮದ ಬಗ್ಗೆ ಮಾತನಾಡುವ ಸಿಎಂ ಜಿಲ್ಲೆಯ ಮುಳುಗಡೆ ಜನರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಹಾಗಾಗಿಯೇ ನಾವು ಹೋರಾಟ ರೂಪಿಸುತ್ತಿದ್ದೇವೆ. ಜಿಲ್ಲೆಯ ಜನತೆ 28ರ ಪಾದಯಾತ್ರೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next