Advertisement

ಮೇಡ್‌ ಇನ್‌ ಇಂಡಿಯಾ ಕೆಂಪು ಬೆಂಡೆಕಾಯಿ!

10:59 PM Dec 14, 2019 | mahesh |

ಕೆಂಪು ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ (ಕೋಶಗಳ ಪುನರುತ್ಪಾದನಾ ಶಕ್ತಿ), ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳು ದೊರಕುತ್ತವೆಯಂತೆ. ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಈ ಕೆಂಪು ಬೆಂಡೆಗೆ ಸಿಗುತ್ತದೆ.

Advertisement

ಭಾರತೀಯ ತರಕಾರಿ ಸಂಶೋಧನಾ ಕೇಂದ್ರ 23 ವರ್ಷಗಳ ಕಠಿಣ ಪರಿಶ್ರಮದ ಅನಂತರ ಅಂತಿಮವಾಗಿ ಹೊಸ ಜಾತಿಯ ಬೆಂಡೆಕಾಯಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟು ದಿನ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಈ ಕೆಂಪು ಬೆಂಡೆಕಾಯಿಯನ್ನು, ಇನ್ನು ಮುಂದೆ ನಮ್ಮ ದೇಶದಲ್ಲೂ ಬೆಳೆಯಬಹುದು. ಹಾಗೆಯೇ ನಮ್ಮ ರೈತರು ಬೆಳೆಯತೊಡಗಿದರೆಂದರೆ ಈಗ ವಿದೇಶದಿಂದ ಮಾಡಿಕೊಳ್ಳುತ್ತಿರುವ ಆಮದನ್ನು ನಿಲ್ಲಿಸಬಹುದು.

ಆರೋಗ್ಯಕ್ಕೂ ಒಳ್ಳೆಯದು
ವಿಜ್ಞಾನಿಗಳ ಪ್ರಕಾರ, ಈ ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ (ಕೋಶಗಳ ಪುನರುತ್ಪಾದನ ಶಕ್ತಿ), ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳು ದೊರಕುತ್ತವೆಯಂತೆ. ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಬೆಂಡೆಕಾಯಿಗಿಂತಲೂ ಹೆಚ್ಚಿನ ಬೆಲೆ ಈ ಕೆಂಪು ಬೆಂಡೆಗೆ ಸಿಗುತ್ತದೆ. ಒಂದು ಕೆ.ಜಿ. ಕಾಶಿ ಲಲಿಮಾ ಬೆಂಡೆಕಾಯಿಗೆ 500 ರೂಪಾಯಿಗಳವರೆಗೆ ಬೆಲೆ ಇದೆ. ಇಷ್ಟು ದಿನ ಈ ಕೆಂಪು ಬೆಂಡೆಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಿಂದ ಆಮದು ಮಾಡಿಕೊಂಡಾಗ ಗ್ರಾಹಕರು ಇಷ್ಟೊಂದು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದರು. ಈ ತಳಿಯನ್ನು ಅಭಿವೃದ್ಧಿಪಡಿಸಿದ ಅನಂತರ ಅದನ್ನು ಆಮದು ಮಾಡುವ ಅಗತ್ಯ ಬರುವುದಿಲ್ಲ. ಆಗ ಅದರ ಬೆಲೆಯೂ ತಗ್ಗಲಿದೆ.

ಎಲ್ಲದರ ಬೆಲೆಯೂ ಕೆ.ಜಿ.ಗೆ 500- 600ರೂ. ಇರುವುದಿಲ್ಲ. ಕೆ.ಜಿ.ಗೆ 100ರಿಂದ 600 ರೂಪಾಯಿಗಳ ಪ್ರಭೇದಗಳೂ ಇವೆ. ಈಗ ಭಾರತೀಯ ರೈತರು ಕೂಡ ಇವುಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ. ಇದರ ಬೀಜಗಳನ್ನು ಇದೇ ಡಿಸೆಂಬರ್‌ನಿಂದ ಸಂಸ್ಥೆಯೇ ಸಾಮಾನ್ಯ ರೈತರಿಗೆ ಒದಗಿಸಲಿದೆ. ಪೋಷಕಾಂಶಗಳಿಂದ ತುಂಬಿರುವ ಈ ಬೆಂಡೆಯ ಉತ್ಪಾದನೆಯು ಭಾರತೀಯ ರೈತರಿಗೆ ಆದಾಯ ತರುವ ಮತ್ತೂಂದು ಮೂಲವಾಗುವುದಲ್ಲದೆ, ಸಾಮಾನ್ಯ ಜನರಿಗೆ ಪೌಷ್ಠಿಕಾಂಶ ಭರಿತ ಹೊಸ ತರಕಾರಿಯ ಪರಿಚಯವೂ ಆಗಲಿದೆ.

ಸಂಶೋಧನೆ ಮತ್ತು ಅಭಿವೃದ್ಧಿ
ಕೆಂಪು ಬೆಂಡೆಕಾಯಿಯನ್ನು ಈವರೆಗೂ ವಿದೇಶದಲ್ಲಿ ಹಾಗೂ ನಮ್ಮ ದೇಶದ ಶ್ರೀಮಂತರ ಮನೆಗಳಲ್ಲಿ ಮಾತ್ರ ನೋಡಬಹುದಿತ್ತು. 1995-96ರಲ್ಲಿಯೇ ಈ ತರಕಾರಿ ತಳಿಯ ಅಭಿವೃದ್ಧಿಯ ಕೆಲಸ ಪ್ರಾರಂಭ ವಾಯಿತಾದರೂ ಈಗ ಯಶಸ್ಸು ಸಿಕ್ಕಿದೆ. ಭಾರತೀಯ ಕೃಷಿ ವಿಜ್ಞಾನಿಗಳು ಸುಮಾರು 23 ವರ್ಷಗಳ ಕಾಲ ಶ್ರಮಿಸಿ ಅಭಿವೃದ್ಧಿಪಡಿಸಿದ ಈ ಬೆಂಡೆಕಾಯಿ ತಳಿಗೆ “ಕಾಶಿ ಲಲಿಮಾ’ ಎಂದು ಹೆಸರಿಡಲಾಗಿದೆ. ಇವು ಡಿಸೆಂಬರ್‌ನಿಂದ ನಮ್ಮ ತರಕಾರಿ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ.

Advertisement

1995-96ರಲ್ಲಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ| ಬಿಜೇಂದ್ರ ಅವರ ನೇತೃತ್ವದಲ್ಲಿ ಸಂಶೋಧನೆ ಪ್ರಾರಂಭಿಸಲಾಯಿತು. ಅವರ ಜತೆಗೆ ಡಾ| ಎಸ್‌.ಕೆ. ಸನ್ವಾಲ, ಡಾ| ಜಿ.ಪಿ. ಮಿಶ್ರಾ ಮತ್ತು ತಾಂತ್ರಿಕ ಸಹಾಯಕ ಸುಭಾಶ್ಚಂದ್ರ ಕೂಡ ಇದರಲ್ಲಿ ಗಮನಾರ್ಹ ಕೊಡುಗೆ ನೀಡಿ¨ªಾರೆ. ನೇರಳೆ-ಕೆಂಪು ಬಣ್ಣದಲ್ಲಿರುವ ಈ ಬೆಂಡೆ, 11-14 ಸೆಂ.ಮೀ. ಉದ್ದ ಮತ್ತು 1.5-1.6 ಸೆಂ.ಮೀ. ವ್ಯಾಸವನ್ನು ಹೊಂದಿರುತ್ತದೆ.

  ಎಸ್‌.ಕೆ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next