Advertisement

ತೋಟ ಮಾಡಿದ್ದೇನೆಯೇ ಹೊರತು ರೆಸಾರ್ಟ್‌ ಮಾಡಿಲ್ಲ: ಎಚ್‌ಡಿಕೆ

11:12 PM Apr 15, 2024 | Team Udayavani |

ಬೆಂಗಳೂರು: ನಾನು ಸಿನೆಮಾ ವಿತರಕನಾಗಿದ್ದಾಗ ಸಂಪಾದಿಸಿದ ಹಣದಲ್ಲಿ ಬಿಡದಿಯ ಬಳಿ ಖರೀದಿಸಿ 45-48 ಎಕ್ರೆ ಭೂಮಿ ಖರೀದಿಸಿದ್ದೇನೆ. ಅಲ್ಲಿ ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆಯುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬೆಂಗಳೂರಿನ ಸುತ್ತಮುತ್ತ ಕುಮಾರಸ್ವಾಮಿಗೆ ಸಾವಿರ ಎಕ್ರೆ ಜಮೀನಿದೆ ಎಂಬ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಬಿಡದಿಯ ಬಳಿ ನನ್ನ ಜಮೀನಿದೆ. ರಾಜಕೀಯಕ್ಕೆ ಬರುವುದಕ್ಕೆ ಮೊದಲೇ ಈ ಜಮೀನನ್ನು ಖರೀದಿಸಿದ್ದೇನೆ. ಈ ಜಮೀನಿನಲ್ಲಿ ನಾನು ತೋಟ ಮಾಡಿದ್ದೇನೆಯೇ ಹೊರತು ರೆಸಾರ್ಟ್‌ ಮಾಡಿಲ್ಲ. ನನ್ನ ಜಮೀನನ್ನು ಬಂದು ನೋಡಬಹುದು ಎಂದು ಏಕವಚನದಲ್ಲೇ ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಯಾವ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸುವುದೇ ಅವರ ಕೆಲಸ. ಹೇಳಿದರೆ ಆ ವ್ಯಕ್ತಿಯ ಬಗ್ಗೆ ಕಂತೆ ಕಂತೆ ಹೇಳಬಹುದು. ಅವರಿಗೆ ನನ್ನದೇ ಆಪತ್ತು. ಅದಕ್ಕೆ ನನ್ನ ವಿರುದ್ದ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next