Advertisement

ಮಡಿಕೇರಿ ಸಮೀಪದ‌ ಗ್ರಾಮಕ್ಕೆ ಕಾಡಾನೆ ಲಗ್ಗೆ

09:12 AM Jul 03, 2018 | Harsha Rao |

ಮಡಿಕೇರಿ: ನಗರಕ್ಕೆ ಹೊಂದಿಕೊಂಡಿರುವ ಮೇಕೇರಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

Advertisement

ಮಡಿಕೇರಿ ನಗರದಿಂದ 5 ಕಿ.ಮೀ. ದೂರದಲ್ಲಿರುವ ಕಾಫಿ ತೋಟಕ್ಕೆ ರವಿವಾರ ರಾತ್ರಿ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಹಲಸಿನ ಹಣ್ಣು ಯಥೇತ್ಛವಾಗಿ ಇರುವ ಕಾರಣ ಆನೆಗಳು ಅಲ್ಲೇ ಬೀಡು ಬಿಟ್ಟಿವೆ. ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬಂದಿ ಮಾಡಿದ ಪ್ರಯತ್ನ ವಿಫ‌ಲವಾಗಿದೆ.

ಮಡಿಕೇರಿ- ಮೇಕೇರಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ, ಕಾಡಾನೆಗಳನ್ನು ಓಡಿಸಲು ಯತ್ನಿಸಲಾಯಿತು. ರಸ್ತೆ ಬದಿಗೆ ಬಂದಿದ್ದ ಆನೆಗಳು ವಾಹನಗಳ ಶಬ್ದಕ್ಕೆ ಬೆದರಿ ಮತ್ತೆ ತೋಟದೊಳಗೆ ನುಸುಳಿವೆ. 
ಕುಶಾಲನಗರ ವಲಯ ಉಪ ಅರಣ್ಯಾಧಿಕಾರಿ ಕನ್ನಂಡ ರಂಜನ್‌ ನೇತೃತ್ವದಲ್ಲಿ ಮಡಿಕೇರಿ ಅರಣ್ಯ ಸಿಬಂದಿ, ರ್ಯಾಪಿಡ್‌ ರೆಸ್ಪಾನ್ಸ್‌ ತಂಡ ಕಾರ್ಯಾಚರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next