Advertisement

ಸೈನಿ ನಿಧನದ ಹಿನ್ನಲೆ ಬಿಜೆಪಿ ಸಂಸದೀಯ ಸಭೆ ಮುಂದಕ್ಕೆ

09:41 AM Jun 26, 2019 | Vishnu Das |

ಹೊಸದಿಲ್ಲಿ: ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಮದನ್‌ ಲಾಲ್‌ ಸೈನಿ ನಿಧನದ ಹಿನ್ನಲೆಯಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಬಿಜೆಪಿಯ ಸಂಸದೀಯ ಪಕ್ಷದಸಭೆ ಮುಂದೂಡಲಾಗಿದೆ.

Advertisement

76 ರ ಹರೆಯದ ರಾಜ್ಯಸಭೆ ಸದಸ್ಯರೂ ಆಗಿದ್ದ ಸೈನಿ ಅವರು
ದೆಹಲಿಯ ಏಮ್ಸ್‌ನಲ್ಲಿ ಶನಿವಾರ ಕೊನೆಯುಸಿರೆಳೆದಿದ್ದರು.

ಸೈನಿ ನಿಧನದ ಹಿನ್ನಲೆಯಲ್ಲಿ ರಾಜ್ಯ ಸಭಾ ಕಲಾಪನ್ನು ನಾಳೆಗೆ ಮುಂದೂಡಲಾಗಿದೆ.

ಪ್ರಸಕ್ತ ಅಧಿವೇಶನದಲ್ಲಿ ಬಿಜೆಪಿಯ ಮೊದಲ ಸಂಸದೀಯ ಪಕ್ಷದ ಸಭೆ ನಡೆಯಬೇಕಾಗಿತ್ತು. ಜೆ.ಪಿ.ನಡ್ಡಾ ಅವರು ಕಾರ್ಯಾಧ್ಯಕ್ಷ ರಾಗಿ ಆಯ್ಕೆ ಯಾದ ಮೇಲೆ ನಡೆಯಬೇಕಾಗಿದ್ದ ಮೊದಲ ಸಭೆ ಇದಾಗಿತ್ತು.

ಸಂಸತ್‌ನ ಲೈಬ್ರೆರಿ ಕಟ್ಟಡದಲ್ಲಿ ನಡೆಯಬೇಕಾಗಿದ್ದ ಸಭೆಯ ಮುಂದಿನ ದಿನಾಂಕವನ್ನುಇನ್ನಷ್ಟೇ ನಿಗದಿ ಪಡಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next