Advertisement

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಮಾದಮ್ಮ ರಾಜ್ಯದ ಪ್ರತಿನಿಧಿ

04:21 PM Jan 24, 2021 | Team Udayavani |

ಚಾಮರಾಜನಗರ: ದೆಹಲಿ ಸಂಸತ್‌ ಭವನದ ಮುಂಭಾಗ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನ‌ಲ್ಲಿ ಭಾಗವಹಿಸಲು ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ತಾಲೂಕಿನ ಪುಣಜನೂರು ಗ್ರಾಪಂ ವ್ಯಾಪ್ತಿಯ ಹೊಸಪೋಡು
ಗ್ರಾಮದ ಮಾದಮ್ಮ ಅವರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಶುಭ ಹಾರೈಸಿ ಬೀಳ್ಕೊಟ್ಟರು.

Advertisement

ಈ ವೇಳೆ ಮಾತನಾಡಿದ ಅವರು, ದೆಹಲಿಯಲ್ಲಿ ಗಣರಾಜ್ಯೋತ್ಸವ ಹಾಗೂ ಪೆರೇಡ್‌ ವೀಕ್ಷಣೆಗಾಗಿ ಕರ್ನಾಟಕದ ಪ್ರತಿನಿಧಿಯಾಗಿ ಹೊಸಪೋಡಿನ ಮಾದಮ್ಮ ಆಯ್ಕೆಯಾಗಿರುವುದು ಜೆಲ್ಲೆಗೆ ಸಂದ ಗೌರವ. ಅದರಲ್ಲೂ ಮಾದಮ್ಮ ಕಾಡಂಚಿನ ಗ್ರಾಮಗಳಲ್ಲಿ ಗಿರಿಜನರಿಗೆ ಮೂಢನಂಬಿಕೆ ವಿರುದ್ಧ ಹಾಗೂ ಶೈಕ್ಷಣಿಕ ಜಾಗೃತಿ ಉಂಟು ಮಾಡುತ್ತಿದ್ದಾರೆ.

ಇವರನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವ, ಪೆರೇಡ್‌ ವೀಕ್ಷಣೆಗೆ ಹಾಗೂ ದೆಹಲಿ ಪ್ರವಾಸ ಮಾಡಿಸುತ್ತಿರುವುದು ತುಂಬಾ ಸಂತಸವಾಗಿದೆ ಎಂದರು. ಈ ವೇಳೆ ತಾಪಂ ಕುಮಾರನಾಯಕ್‌, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಗಂಗಾಧರ್‌ ಹಾಜರಿದ್ದರು.

ಇದನ್ನೂ ಓದಿ:ಫೆಬ್ರವರಿಯಿಂದ ಇಡೀ ದಿನ ಶಾಲೆ ನಡೆಸಲು ಸಮಾಲೋಚನೆ

Advertisement

Udayavani is now on Telegram. Click here to join our channel and stay updated with the latest news.

Next