Advertisement

ಮಾನ್ವಿ: ಮಳೆಯಿಂದ ಮನೆಗೋಡೆ ಕುಸಿದು ಮೂವರು ಸಾವು

11:44 AM Oct 03, 2022 | Team Udayavani |

ರಾಯಚೂರು: ನಿರಂತರ ಸುರಿದ ಮಳೆಯಿಂದ ಮನೆಗೋಡೆ ಕುಸಿದು ಮೂವರು ಮೃತಪಟ್ಟ ದಾರುಣ ಘಟನೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಪರಮೇಶ (45), ಪತ್ನಿ ಜಯಮ್ಮ (39), ಹಾಗೂ ತಮ್ಮನ ಮಗ ಭರತ್ (5) ಮೃತ ದುರ್ವೈವಿಗಳು. ಸೋಮವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ.

ಪರಮೇಶ ಹಾಗೂ ಜಯಮ್ಮ ಸ್ಥಳದಲ್ಲೇ‌ ಮೃತಪಟ್ಟರೆ, ಬಾಲಕ ಭರತ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದದ್ದಲ್ ಬಸನಗೌಡ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next