Advertisement

ಅಕ್ರಮ ಚಿನ್ನ ಸಾಗಾಣಿಕೆ ಬಗ್ಗೆ ಶಿವಶಂಕರ್‌ಗೆ ಗೊತ್ತಿತ್ತು: ಕೋರ್ಟ್‌ಗೆ ಇ.ಡಿ. ಮಾಹಿತಿ

05:45 PM Nov 11, 2020 | sudhir |

ಕೊಚ್ಚಿ: ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿರುವ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಬಗ್ಗೆ ವಜಾಗೊಂಡಿರುವ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್‌ಗೆ ಗೊತ್ತಿತ್ತು. ಜತೆಗೆ ಅವರು ಸರ್ಕಾರ ಜಾರಿಗೊಳಿಸುವ ಪ್ರಮುಖ ಯೋಜನೆಗಳ ಮಾಹಿತಿಯನ್ನು ಸ್ವಪ್ನಾ ಜತೆಗೆ ಹಂಚಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ. ಕೊಚ್ಚಿಯಲ್ಲಿರುವ ವಿಶೇಷ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿರುವ ಅಫಿಡವಿಟ್‌ನಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ.

Advertisement

ರಾಜತಾಂತ್ರಿಕ ಮಾರ್ಗಗಳ ಮೂಲಕ ಸಾಗಣೆಯಾಗುವ ಚಿನ್ನದ ಬಗ್ಗೆ ಶಿವಶಂಕರ್‌ಗೆ ಮಾಹಿತಿ ಇತ್ತು. ಎಲ್‌ಡಿಎಫ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಲೈಫ್ ಮಿಷನ್‌ ಪ್ರಾಜೆಕ್ಟ್’ ಜಾರಿಗೆ ಸಂಬಂಧಿಸಿದಂತೆ 1 ಕೋಟಿ ರೂ. ಕಮಿಷನ್‌ ಅನ್ನು ಶಿವಶಂಕರ್‌ಗೆ ನೀಡಲಾಗಿತ್ತು ಎಂದು ಸ್ವಪ್ನಾ ಸುರೇಶ್‌ ಇ.ಡಿ.ಗೆ ತಿಳಿಸಿದ್ದಾಳೆ. ಆ ಮೊತ್ತವನ್ನು ಎನ್‌ಐಎ ಸ್ವಪ್ನಾ ಲಾಕರ್‌ನಿಂದ ವಶಪಡಿಸಿಕೊಂಡಿದ್ದರು. ಆ ಲಾಕರ್‌ ಅನ್ನು ಶಿವಶಂಕರ್‌ ಸೂಚನೆ ಹಿನ್ನೆಲೆಯಲ್ಲಿಯೇ ತೆರೆಯಲಾಗಿತ್ತು.

‌ಈ ಸಂದರ್ಭದಲ್ಲಿ ವಜಾಗೊಂಡಿರುವ ಅಧಿಕಾರಿ ಜತೆಗಿನ ಕೆಲವು ವಾಟ್ಸ್‌ಆ್ಯಪ್‌ ಚಾಟ್‌ನ ಮಾಹಿತಿಯನ್ನು ಸ್ವಪ್ನಾ ಸುರೇಶ್‌ ಅಧಿಕಾರಿಗಳಿಗೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next