Advertisement

ಜಮೀರ್ ಒಬ್ಬ ಗುಜರಿ ಗಿರಾಕಿ, ಗಳಿಸಿದ್ದೆಲ್ಲಾ ಅನೈತಿಕವಾಗಿಯೇ: ರೇಣುಕಾಚಾರ್ಯ ವಾಗ್ದಾಳಿ

03:49 PM Sep 12, 2020 | keerthan |

ದಾವಣಗೆರೆ: ಶಾಸಕ ಜಮೀರ್ ಅಹಮದ್ ಖಾನ್ ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ. ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಜಮೀರ್ ಅಹಮದ್ ಏನೇ ಗಳಿಸಿದ್ದರೂ ಅದು ಅನೈತಿಕ ಚಟುವಟಿಕೆಗಳಿಂದಲೇ ಎಂದು ಬಿಜೆಪಿ ಶಾಸಕ‌ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಖಾನ್ ನಮಗೆ ಅನೇಕ ಸವಾಲುಗಳನ್ನು ಹಾಕಿ ಸೋತಿದ್ದಾರೆ. ಅವರೀಗ ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕು ಎಂದರು.

ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ತಾನು ಖಾಕಿ ಬಟ್ಟೆ ಹಾಕಿ ದೊಣ್ಣೆ ಹಿಡಿದು ಅವರ ಮನೆ ಕಾಯುವ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಯಡಿಯೂರಪ್ಪ ಸಿಎಂ ಆದರೂ ಜಮೀರ್ ವಾಚ್ ಮನ್ ಆಗಲಿಲ್ಲ. ಒಂದು ರೀತಿಯಲ್ಲಿ ಜಮೀರ್ ಎರಡು ನಾಲಿಗೆಯ ವ್ಯಕ್ತಿ ಎಂದು ಟೀಕಿಸಿದರು.

ಇದನ್ನೂ ಓದಿ: ಕುರಿ ಫಾರ್ಮ್ ನಲ್ಲಿ ಗಾಂಜಾ ಪತ್ತೆ ಪ್ರಕರಣ: ಸಿಪಿಐ, ಪಿಎಸ್ಐ ಸೇರಿ ಐವರು ಪೊಲೀಸರ ಅಮಾನತು

ಡ್ರಗ್ಸ್ ದಂಧೆ ಹಿಂದಿನ ಸರಕಾರದ ವೈಫಲ್ಯದಿಂದ ಬೆಳೆದುಕೊಂಡು ಬಂದಿದೆ. ಎಷ್ಟೇ ಪ್ರಭಾವಿ ಇದ್ದರೂ ಈಗ ಅವರ ಆಟ ನಡೆಯುವುದಿಲ್ಲ. ನಮ್ಮ ಸರಕಾರ ಮುಲಾಜಿಲ್ಲದೆ ಕ್ರಮ ಜರುಗಿಸುತ್ತದೆ. ಡ್ರಗ್ಸ್ ತನಿಖೆ ವಿಚಾರದಲ್ಲಿ ನಮ್ಮ ಸರ್ಕಾರ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಉಪ್ಪು ತಿಂದವರು ನೀರು‌ಕುಡಿಯಲೇ ಬೇಕು. ಡ್ರಗ್ಸ್ ವಿಚಾರದಲ್ಲಿ ಎಲ್ಲ ಸತ್ಯಾಂಶ ಹೊರಬರಲಿದೆ ಎಂದರು.

Advertisement

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪಅವರುಗಳು ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅಭಿವೃದ್ಧಿ ಕೆಲಸದ ಬಗ್ಗೆ ಮಾತ್ರ ಮಾತನಾಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next