Advertisement

ರಮೇಶ ಜಾರಕಿಹೊಳಿ ಡಿಸಿಎಂ ಆದರೆ ಸ್ವಾಗತ: ಬಿಜೆಪಿ ಶಾಸಕ

09:28 AM Nov 09, 2019 | keerthan |

ದಾವಣಗೆರೆ: ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಅವರು ಉಪ ಮುಖ್ಯಮಂತ್ರಿ ಆದರೆ ಸ್ವಾಗತ ಮಾಡುವೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ರಮೇಶ್ ಹಾಗೂ ಬಾಲಚಂದ್ರ ನನ್ನ ಆತ್ಮೀಯರು. ಮೇಲಾಗಿ ರಮೇಶ್ ಜಾರಕಿಹೊಳಿ ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರು. ಹೀಗಾಗಿ ಅವರು ಡಿಸಿಎಂ ಆದ್ರೆ ನಾನು ಸ್ವಾಗತಿಸುವೆ ಎಂದರು.

ನಂತರ ಮಾತನಾಡಿದ ರೇಣುಕಾಚಾರ್ಯ, ಕಳೆದ ಚುನಾವಣೆಯಲ್ಲಿ ಡುಮ್ಕಿ (ಸೋತ) ಹೊಡೆದ ಡಿಸಿಎಂ ಲಕ್ಷ್ಮಣ ಸವದಿಗೆ ಗೆದ್ದವರಿಗೆ ಅವಕಾಶ ಇರಲಿ ಎಂದು ಹೇಳಿದ್ದೆ. ಇದನ್ನ ಬಿಟ್ಟು ಅವರ ಬಗ್ಗೆ ನನಗೆ ಬೇಸರವಿಲ್ಲ. ಲಕ್ಷ್ಮನ ಸವದಿ ಮತ್ತು ನಾನು ಸ್ನೇಹಿತರು ಎಂದರು.

ಈ ಹಿಂದಿನ ಚುನಾವಣೆಯಲ್ಲಿ ನಾನು ಸೋತಿದ್ದೆ. ಆಗ ನಾನು ಸುಮ್ಮನಿದ್ದೆ. ಜೊತೆಗೆ ಈಗ ಅವರು ಸೋತಿದ್ದಾರೆ,  ಗೆದ್ದವರಿಗೆ ಅವಕಾಶ ನೀಡಿ ಎಂದಿದ್ದೆ. ಆದರೆ, ನಾನು ಸಚಿವ ಆಗಬೇಕು ಅಂತಾ ಲಾಬಿ ‌ಮಾಡಿಲ್ಲ. ನನಗೆ ಸಚಿವ ಸ್ಥಾನವೇ ಬೇಡ ಎಂದು ಲಕ್ಷ್ಮಣ ಸವದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next