Advertisement

ಎಂ.ಜಿ. ನಾಯಕ ಸೇವೆ ಸ್ಮರಣೀಯ: ರುದ್ರಸ್ವಾಮಿ

02:48 PM Jul 29, 2020 | Suhan S |

ಯಾದಗಿರಿ: ಸುರಪುರ ಅರಸು ಮನೆತನದ ಶ್ರೇಷ್ಠ ರಾಜಕಾರಣಿ ಮತ್ತು ಸಾಂಸ್ಕೃತಿಕ ಸಾಹಿತಿಗಳು ಎಂದೆ ಪ್ರಖ್ಯಾತಿ ಪಡೆದ ರಾಜಾ ಮದನಗೋಪಾಲ ನಾಯಕ ಅವರ ಸೇವೆ ಅವಿಸ್ಮರಣೀಯ ಎಂದು ಸಾಹಿತಿ ರುದ್ರಸ್ವಾಮಿ ಚಿಕ್ಕಮಠ ಹೇಳಿದರು.

Advertisement

ಇಲ್ಲಿನ ಬುದ್ಧ ಬಸವ ನಗರದಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ, ನಾಯಕರು ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಶಕ್ತಿ ಹೊಂದಿ, ಮುಂದೆ ರಾಜಕಾರಣದಲ್ಲಿ ಧುಮುಕಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಅವರ ಅಗಲಿಕೆಯಿಂದ ಅಪಾರ ನಷ್ಟವಾಗಿದೆ ಎಂದು ಸ್ಮರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುಭಾಸ ಮಾಳಿಕೇರಿ, ನ್ಯಾಯವಾದಿ ಶಾಂತಪ್ಪ ಖಾನಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next